Webdunia - Bharat's app for daily news and videos

Install App

ಯೋಧನ ಅಂತ್ಯ ಸಂಸ್ಕಾರದ ಸ್ಥಳ ಬದಲು…

Webdunia
ಶನಿವಾರ, 16 ಫೆಬ್ರವರಿ 2019 (10:37 IST)
ಹುತಾತ್ಮ ಯೋಧ ಗುರು ಅಂತ್ಯ ಸಂಸ್ಕಾರದ ಸ್ಥಳ ಬದಲಾಗಿದೆ. ಮಂಡ್ಯದ ಮದ್ದೂರು ಮಳವಳ್ಳಿ ರಸ್ತೆ ಪಕ್ಕದ ಜಾಗದಲ್ಲಿ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ನಡೆದಿದೆ.

ಈ ಹಿಂದೆ ಗ್ರಾಮದ ಹೊರವಲಯದ  ಬಳಿಯ ಸರ್ಕಾರಿ ಜಾಗದಲ್ಲಿ ಅಂತ್ಯ ಸಂಸ್ಕಾರಕ್ಕೆ ಜಾಗ ಗುರ್ತಿಸಲಾಗಿತ್ತು. ಈ ಜಾಗದ ಬಗ್ಗೆ ಕುಟುಂಬಸ್ಥರು ಮತ್ತು ಮತ್ತು ಗುರು ಸ್ನೇಹಿತರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಜಾಗದಲ್ಲಿ ಅಂತ್ಯ ಸಂಸ್ಕಾರ ಬೇಡ ವೆಂದು ಪಟ್ಟು ಹಿಡಿದಿದ್ದರು. ಈ ಜಾಗದಲ್ಲಿ ಅಂತ್ಯ ಸಂಸ್ಕಾರ ಮಾಡಿದರೆ ಗುರುವಿನ ಬಲಿದಾನ ವ್ಯರ್ಥವಾಗುತ್ತೆ ಎಂದಿದ್ದರು.

ವಿರೋಧದ ಕಾರಣದಿಂದ ಅಂತ್ಯ ಸಂಸ್ಕಾರದ ಜಾಗವನ್ನು ಜಿಲ್ಲಾಡಳಿತ ಬದಲಿಸಿದೆ. ಮದ್ದೂರು ಮಳವಳ್ಳಿ ರಸ್ತೆ ಪಕ್ಕದ ಜಾಗದಲ್ಲಿ ಮೃತ ಯೋಧನ ಅಂತ್ಯ ಸಂಸ್ಕಾರಕ್ಕೆ ಅಂತಿಮ‌ ಸ್ಥಳ‌ ನಿಗದಿ ಪಡಿಸಿದೆ. ಮೃತ ಯೋಧನ ಅಂತಿಮ ಸಂಸ್ಕಾರಕ್ಕೆ 35 ಗುಂಟೆ ಸರ್ಕಾರಿ ‌ಜಾಗವನ್ನು ಜಿಲ್ಲಾಡಳಿತ ನೀಡಿದೆ.

ಅಂತ್ಯ ಸಂಸ್ಕಾರಕ್ಕೆ ನಿಗದಿಗೊಳಿದ ಜಾಗವನ್ನು ಜೆಸಿಬಿ ಯಂತ್ರದ ಮೂಲಕ ಸಮತಟ್ಟುಗೊಳಿಸುವ ಸಿದ್ದತೆ ನಡೆದಿದೆ. ಹಿಂದೂ ಪದ್ದತಿಯಂತೆ ಗುರು ವಿನ  ಅಂತಿಮ‌ ಸಂಸ್ಕಾರ ನಡೆಯಲಿದೆ.  



ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments