Select Your Language

Notifications

webdunia
webdunia
webdunia
webdunia

ಅಪಘಾತ ಮಾಡಿ ಜನರನ್ನು ನಿಂದಿಸಿದ ಮಹಿಳೆಗೆ ಸ್ಥಳೀಯರ ಧರ್ಮದೇಟು

ಅಪಘಾತ ಮಾಡಿ ಜನರನ್ನು ನಿಂದಿಸಿದ ಮಹಿಳೆಗೆ ಸ್ಥಳೀಯರ ಧರ್ಮದೇಟು
ಮೈಸೂರು , ಸೋಮವಾರ, 24 ನವೆಂಬರ್ 2014 (19:23 IST)
ಮೈಸೂರಿನಲ್ಲಿ ಮಹಿಳೆಯೊಬ್ಬಳು ಅಪಘಾತ ಮಾಡಿ ಪ್ರಶ್ನಿಸಿದವರಿಗೆ ನಿಂದಿಸಿದ ಘಟನೆ ನಡೆದಿದೆ. ಇದರಿಂದ ರೊಚ್ಚಿಗೆದ್ದ ಸ್ಥಳೀಯರು ಕಾರಿನ ಗಾಜನ್ನು ಪುಡಿ, ಪುಡಿ ಮಾಡಿದರು ಮತ್ತು ಜನರಿಗೇ ಆವಾಜ್ ಹಾಕಿದ ಮಹಿಳೆಗೆ  ಧರ್ಮದೇಟು ನೀಡಿದರು.

 ಚಂದ್ರಪ್ಪ ಎಂಬವರ ಹೋಂಡಾ ಆಕ್ಟಿವಾ ಮಹಿಳೆಯ ಕಾರಿಗೆ ಡಿಕ್ಕಿ ಹೊಡೆದು ಅಪಘಾತವಾದ ನಂತರ ಚಾಲಕಿ ಕಾರಿನಿಂದ ಕೆಳಕ್ಕಿಳಿಯದೇ ಕಾರಿನಲ್ಲೇ ಕುಳಿತಿದ್ದರು. ಇದರಿಂದ ರೊಚ್ಚಿಗೆದ್ದ ಸ್ಥಳೀಯರು ಕೆಳಕ್ಕಿಳಿಯುವಂತೆ ಒತ್ತಾಯಿಸಿದಾಗ ಅವರು ಜನರನ್ನು ನಿಂದಿಸಿದರು.

ಇದರಿಂದ ಆಕ್ರೋಶಗೊಂಡ ಕೆಲವರು ಮಹಿಳೆಯನ್ನು ಕಾರಿನಿಂದ ಎಳೆದು ಧರ್ಮದೇಟು ಕೂಡ ಹೊಡೆದರು. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ತಮ್ಮ ಕಾರಿಗೆ ಹೊಂಡಾ ಚಾಲಕ ಸ್ವತಃ ಗುದ್ದಿದ್ದರಿಂದ ತಾವು ಆ ಕಡೆ ಗಮನವಹಿಸಲಿಲ್ಲ ಎಂದು ಮಹಿಳೆ ಸಮಜಾಯಿಷಿ ನೀಡಿದ್ದಾಳೆ. 

Share this Story:

Follow Webdunia kannada