Select Your Language

Notifications

webdunia
webdunia
webdunia
webdunia

ಸಾಲಬಾಧೆ: ಮಗು ಸೇರಿ ಮೂವರು ನೇಣಿಗೆ ಶರಣು

ಸಾಲಬಾಧೆ: ಮಗು ಸೇರಿ ಮೂವರು ನೇಣಿಗೆ ಶರಣು
ಹಾಸನ , ಸೋಮವಾರ, 6 ಜುಲೈ 2015 (15:50 IST)
ಹಣಕಾಸು ವ್ಯವಹಾರದಲ್ಲಿ ನಷ್ಟ ಉಂಟಾಯಗಿದೆ ಎಂದು ಮನನೊಂದ ಒಂದೇ ಕುಟುಂಬದ ಮೂವರು ಸದಸ್ಯರು ನೇಣು ಬಿಗಿದುಕೊಳ್ಳುವ ಮೂಲಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಹಡ್ಲಿಮನೆ ವ್ಯಾಪ್ತಿಯಲ್ಲಿ ನಡೆದಿದೆ. 
 
ಮೃತ ವ್ಯಕ್ತಿಗಳನ್ನು ಪತಿ ಜೈಶಂಕರ್(35), ಆತನ ಪತ್ನಿ ತರುಣಾ(32) ಹಾಗೂ ಮಗಳು ಭೂಮಿಕಾ(11) ಎಂದು ಹೇಳಲಾಗಿದೆ. 
 
ಪ್ರಕರಣದ ಹಿನ್ನೆಲೆ: ಮೃತ ಜೈಶಂಕರ್ ಫೈನಾನ್ಸ್ ವ್ಯಹಾರಗಳನ್ನು ನಡೆಸುತ್ತಿದ್ದರು ಎಂದು ಹೇಳಲಾಗಿದ್ದು, ಇತ್ತಿಚೆಗೆ ಸಾಕಷ್ಟು ನಷ್ಟ ಅನುಭವಿಸಿದ್ದರು. ನಷ್ಟದಿಂದ ಸಾಲವೂ ಕೂಡ ಮೀತಿ ಮೀರಿ ಬೆಳೆದಿತ್ತು ಎನ್ನಲಾಗಿದ್ದು, 14 ಲಕ್ಷಕ್ಕೂ ಅಧಿಕವಾಗಿತ್ತು. ಅಲ್ಲದೆ ಸಾಲಗಾರರು ಹಣ ವಾಪಾಸಾತಿ ಮಾಡುವಂತೆ ಕಿರುಕುಳ ನೀಡುತ್ತಿದ್ದರು ಎಂದು ತಿಳಿದು ಬಂದಿದೆ. ಇದರಿಂದ ಮನನೊಂದ ದಂಪತಿ ಇಂದು ಮೊದಲು ತಮ್ಮಗಳಿಗೆ ನೇಣು ಬಿಗಿದು ಹತ್ಯೆಗೈದು, ಬಳಿಕ ತಾವೂ ನೇಣಿಗೆ ಶರಣಾಗಿದ್ದಾರೆ. 
 
ಇನ್ನು ತಾವು ಸಾವಿಗೆ ಶಱಣಾಗುತ್ತಿರುವ ಸಂಗತಿಯನ್ನು ಮೃತ ಜೈಶಂಕರ್ ದೂರವಾಣಿ ಮೂಲಕ ತಮ್ಮ ಹಿತೈಷಿಗಳಿಗೆ ಹಾಗೂ ಗೆಳೆಯರಿಗೆ ತಿಳಿಸಿದ್ದರು ಎಂದು ತಿಳಿದು ಬಂದಿದೆ.  
 
ಈ ಸಂಬಂಧ ನಗರದ ಪೆನ್ಷನ್ ಮೊಹಲ್ಲಾ ಠಾಣೆಯಲ್ಲಿ ಪ್ರಕಱಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. 

Share this Story:

Follow Webdunia kannada