Select Your Language

Notifications

webdunia
webdunia
webdunia
webdunia

ಟೆಂಪೋ ಇಳಿದವನನ್ನು ಹೊತ್ತೊಯ್ದ ಚಿರತೆ

ಟೆಂಪೋ ಇಳಿದವನನ್ನು ಹೊತ್ತೊಯ್ದ ಚಿರತೆ
ಚಾಮರಾಜನಗರ , ಗುರುವಾರ, 27 ನವೆಂಬರ್ 2014 (09:08 IST)
ಮೂತ್ರ ವಿಸರ್ಜನೆ ಮಾಡಲೆಂದು ಟೆಂಪೋದಿಂದ ಕೆಳಗಿಳಿದವನನ್ನು  ಚಿರತೆಯೊಂದು ಹೊತ್ತೊಯ್ದ ದಾರುಣ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ.

ಕರ್ನಾಟಕ-ತಮಿಳುನಾಡಿ ಗಡಿಯ ದಿಂಬಮ್ ಅರಣ್ಯ ವ್ಯಾಪ್ತಿಯಲ್ಲಿ ಇಂದು ಬೆಳಿಗ್ಗೆ ನಾಲ್ಕು ಗಂಟೆಗೆ ಈ ಘಟನೆ ನಡೆದಿದೆ. ಕೊಳ್ಳೆಗಾಲ ತಾಲ್ಲೂಕಿನ ಲೊಕ್ಕನಹಳ್ಳಿಯ ನಿವಾಸಿ ಸೀನ (26)  ತರಕಾರಿ ವ್ಯಾಪಾರಕ್ಕೆಂದು  ತಮಿಳುನಾಡಿಗೆ ಹೊರಟಿದ್ದರು. ಮಾರ್ಗ ಮಧ್ಯದಲ್ಲಿ ಮೂತ್ರ ವಿಸರ್ಜನೆಗೆಂದು ವಾಹನದಿಂದ ಕೆಳಗಿಳಿದು ರಸ್ತೆ ಬದಿಗೆ ಹೋಗಿದ್ದರು. ಆ ಸಮಯದಲ್ಲಿ ದಾಳಿ ನಡೆಸಿದ ಚಿರತೆ, ಅವರನ್ನು ಎಳೆದುಕೊಂಡು ಕಾಡಿನೊಳಕ್ಕೆ ಕೊಂಡೊಯ್ದಿದೆ.
 
ಯುವಕನನ್ನು ಹೊತ್ತುಕೊಂಡು ನಾಪತ್ತೆಯಾಗಿರುವ  ಚಿರತೆಗಾಗಿ ಅರಣ್ಯ ಸಿಬ್ಬಂದಿ ಶೋಧ ನಡೆಸಿದ್ದಾರೆ. 

Share this Story:

Follow Webdunia kannada