Select Your Language

Notifications

webdunia
webdunia
webdunia
webdunia

ಭಾವಿ ಪತಿ ಟೀಕೆಗೆ ಬೇಸತ್ತು ಸಾವಿಗೆ ಶರಣಾದ ಉಪನ್ಯಾಸಕಿ

ಭಾವಿ ಪತಿ ಟೀಕೆಗೆ ಬೇಸತ್ತು ಸಾವಿಗೆ ಶರಣಾದ ಉಪನ್ಯಾಸಕಿ
ಮಂಡ್ಯ , ಮಂಗಳವಾರ, 22 ಮಾರ್ಚ್ 2016 (16:44 IST)
ಇನ್ನು ನಾಲ್ಕೈದು ದಿನಗಳಲ್ಲಿ ಮದುವೆಯಾಗಬೇಕಿದ್ದ ಉಪನ್ಯಾಸಕಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡು ಸಾವಿಗೆ ಶರಣಾದ ಘಟನೆ ಮಂಡ್ಯದಲ್ಲಿ ನಡೆದಿದೆ. 
 
ಮೃತಳನ್ನು ಶೃತಿ(25) ಎಂದು ಗುರುತಿಸಲಾಗಿದ್ದು ಎಂಟೆಕ್ ಓದಿದ್ದ ಅವರು ಎಂಜಿನಿಯರಿಂಗ್ ಕಾಲೇಜ್‍ನಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. 
 
ಶೃತಿಯ ಮದುವೆ ಮಾರ್ಚ್ 27 ರಂದು ನಿಶ್ಚಯವಾಗಿತ್ತು.
 
ಹಾಸನ ಜಿಲ್ಲೆ ಚನ್ನರಾಯಪಟ್ಟಣದ ನಿವಾಸಿ ಹುತ್ತೇಶ್ ಎಂಬ ಯುವಕನೊಂದಿಗೆ ಮದುವೆ ಶೃತಿ ಮದುವೆ ನಿಶ್ಚಯವಾಗಿತ್ತು. ರಾಜ್ಯ ರಾಜಧಾನಿಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಹುತ್ತೇಶ್ ಅವರ ಕುಟುಂಬದವರು ಹೆಚ್ಚಿನ ವರದಕ್ಷಿಣೆ ನೀಡುವಂತೆ ಶೃತಿ ಮನೆಯವರಿಗೆ ಡಿಮ್ಯಾಂಡ್ ಇಟ್ಟಿದ್ದರಂತೆ.ಇದರಿಂದ ಶೃತಿ ತೀವ್ರ ನೊಂದಿದ್ದರು. ಜತೆಗೆ ಭಾವಿ ಪತ್ನಿ ಮಾಡರ್ನ್ ಆಗಿಲ್ಲವೆಂದು ಹುತ್ತೇಶ್ ಟೀಕಿಸುತ್ತಿದ್ದರಂತೆ. ಅದರಿಂದ ಮನನೊಂದಿದ್ದ ಶೃತಿ ಮಾರ್ಚ್ 17 ರಂದು ವಿಷ ಕುಡಿದು ಆತ್ಮಹತ್ಯೆ ಯತ್ನಿಸಿದ್ದಳು. ಮನೆಯವರು ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶೃತಿ ಇಂದು ದುರ್ಮರಣವನ್ನಪ್ಪಿದ್ದಾರೆ. 
 
ಡೆತ್ ನೋಟ್ ವಶಪಡಿಸಿಕೊಂಡಿರುವ ಕೆಆರ್ ಪೇಟೆ ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ. 

Share this Story:

Follow Webdunia kannada