Select Your Language

Notifications

webdunia
webdunia
webdunia
webdunia

ಆರ್ಟ್ ಆಫ್ ಲೀವಿಂಗ್ ವಿರುದ್ಧ 11 ಎಕರೆ ಭೂಒತ್ತುವರಿ ಆರೋಪ

ಆರ್ಟ್ ಆಫ್ ಲೀವಿಂಗ್ ವಿರುದ್ಧ 11 ಎಕರೆ ಭೂಒತ್ತುವರಿ ಆರೋಪ
ಬೆಂಗಳೂರು , ಮಂಗಳವಾರ, 28 ಅಕ್ಟೋಬರ್ 2014 (15:24 IST)
ರವಿಶಂಕರ್  ಗುರೂಜಿ ಅವರ ಆರ್ಟ್ ಆಫ್ ಲೀವಿಂಗ್  ಭೂಒತ್ತುವರಿ ಆರೋಪದ ಸುಳಿಗೆ ಸಿಕ್ಕಿಬಿದ್ದಿದೆ. ತಮಗೆ ಸೇರಿದ  ಕೆಂಗೇರಿ ಬಳಿಯಿರುವ ಸರ್ವೆ ನಂ. 71/2ಬಿಯ  11 ಎಕರೆ ಭೂಮಿಯನ್ನು ಆರ್ಟ್ ಆಫ್ ಲೀವಿಂಗ್ ಒತ್ತುವರಿ ಮಾಡಿಕೊಂಡಿದೆ ಎಂದು ಆರತಿಕೃಷ್ಣ  ಎಂಬುವರು ಆರೋಪಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಬೆಂಗಳೂರು ದಕ್ಷಿಣ ತಹಶೀಲ್ದಾರ್  ಸರ್ವೆ ಕೂಡ ಮಾಡಿದ್ದು, 11 ಎಕರೆ ಭೂಮಿಯನ್ನು ಒತ್ತುವರಿ ಮಾಡಿರುವುದು ದೃಢಪಟ್ಟಿದೆ.  ಆರ್ಟ್ ಆಫ್ ಲೀವಿಂಗ್ ಖರೀದಿಸಿದ್ದು 5 ಎಕರೆಯಾದ್ರೂ 11 ಎಕರೆ ಒತ್ತುವರಿಯಾಗಿರುವುದು ಸಂಶಯಕ್ಕೆ ಆಸ್ಪದ ಕಲ್ಪಿಸಿದ್ದು, ಸರ್ವೇ ವರದಿಯಲ್ಲಿ ಮೇಲ್ನೋಟಕ್ಕೆ  ಒತ್ತುವರಿಯಾಗಿರುವುದು ಸಾಬೀತಾಗಿದೆ.

ಆರತಿ ಕೃಷ್ಣ ಅವರು ಸಚಿವ ಬೇಗಾನೆ ರಾಮಯ್ಯ ಅವರ ಪುತ್ರಿಯಾಗಿದ್ದು, 11 ಎಕರೆ ಜಮೀನನ್ನು ಆರತಿ ಕೃಷ್ಣ ಪತಿಯಿಂದ ದಾನ ಪಡೆದಿದ್ದರು. 

Share this Story:

Follow Webdunia kannada