ಬೆಂಗಳೂರಿನಲ್ಲಿ ಖತರ್ನಾಕ್ ಕಳ್ಳಿಯನ್ನು ಬಂಧಿಸಲಾಗಿದೆ. ಡ್ರಾಪ್ ಕೊಡುವ ನೆಪದಲ್ಲಿ ಪ್ರಯಾಣಿಕರನ್ನು ಕಾರಿನಲ್ಲಿ ಕೂರಿಸಿಕೊಂಡು ಸುಲಿಗೆ ಮಾಡುತ್ತಿದ್ದ ಆಶಾ ಅಲಿಯಾಸ್ ಸೌಂದರ್ಯ ಅಲಿಯಾಸ್ ಕವಿತಾ ಎಂಬವಳನ್ನು ಪೊಲೀಸರು ಬಂಧಿಸಿದ್ದಾರೆ.
ತಾನು ಸಿವಿಲ್ ಪೊಲೀಸ್ ಎಂದು ಬೆದರಿಸಿ ಅತ್ಯಾಚಾರದ ದೂರನ್ನು ನೀಡುವುದಾಗಿ ಬೆದರಿಕೆ ಹಾಕಿ ಪ್ರಯಾಣಿಕರಿಂದ ಹಣ, ಆಭರಣ ಸುಲಿಗೆ ಮಾಡುತ್ತಿದ್ದಳು. 50 ವರ್ಷ ಮೇಲ್ಪಟ್ಟ ಪುರುಷರೇ ಇವಳ ಗುರಿಯಾಗಿದ್ದಳು.
ಪೊಲೀಸರು ಮಫ್ತಿಯಲ್ಲಿ ಅವಳಿದ್ದ ಕಾರನ್ನು ಹತ್ತಿದಾಗ ಅವರಿಗೆ ಕೂಡ ನಗದು ಹಣ ನೀಡದಿದ್ದರೆ ಅತ್ಯಾಚಾರದ ದೂರನ್ನು ನೀಡುವುದಾಗಿ ಬೆದರಿಸಿ ಹಣ, ಚಿನ್ನಾಭರಣ ಕೀಳಲು ಪ್ರಯತ್ನಿಸಿದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.