Select Your Language

Notifications

webdunia
webdunia
webdunia
webdunia

ಸಂಡೂರಿನಲ್ಲಿ ರೆಸಾರ್ಟ್ ಮುಚ್ಚುವಂತೆ ಲಾಡ್ ಸಹೋದರರಿಗೆ ಆದೇಶ

ಸಂಡೂರಿನಲ್ಲಿ  ರೆಸಾರ್ಟ್ ಮುಚ್ಚುವಂತೆ ಲಾಡ್ ಸಹೋದರರಿಗೆ ಆದೇಶ
ಬಳ್ಳಾರಿ , ಶುಕ್ರವಾರ, 25 ಜುಲೈ 2014 (17:22 IST)
ಸಂಡೂರಿನಲ್ಲಿ ಅರಣ್ಯಭೂಮಿಯನ್ನು ಒತ್ತುವರಿ ಮಾಡಿಕೊಂಡು ನಿರ್ಮಿಸಿರುವ ರೆಸಾರ್ಟ್ ಮುಚ್ಚುವಂತೆ ಲಾಡ್ ಸಹೋದರರಿಗೆ ಅರಣ್ಯ ಇಲಾಖೆ ಆದೇಶ ನೀಡಿದೆ.  4724 ಹೆಕ್ಟೇರ್ ಭೂಮಿ  ರೆಸಾರ್ಟ್ ನಿರ್ಮಾಣಕ್ಕಾಗಿ ಕಬಳಿಕೆಯಾಗಿದೆ. ಕಾನೂನು ಬಾಹಿರವಾಗಿ ರೆಸಾರ್ಟ್ ನಿರ್ಮಿಸಲಾಗಿದೆ.ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡು ರೆಸಾರ್ಟ್ ನಿರ್ಮಾಣ ಮಾಡಿರುವುದು ತನಿಖೆಯಿಂದ ಬಹಿರಂಗವಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. 

ರೆಸಾರ್ಟ್ ವಿರುದ್ಧ ಹೈಕೋರ್ಟ್‌ನಲ್ಲಿ ಪಿಐಎಲ್ ಸಲ್ಲಿಸಿದ ಬಳಿಕ ಜಂಟಿ ಸರ್ವೇಕ್ಷಣೆ ಕೂಡ ಮಾಡಲಾಗುತ್ತದೆ. 3.5 ಎಕರೆ ಪ್ರದೇಶ ಪರವಾನಗಿ ಪಡೆದುಕೊಂಡು ಉಳಿದ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವುದು ಬಯಲಾಗುತ್ತದೆ.

ಇದನ್ನು ಕೂಡಲೇ ತೆರವು ಗೊಳಿಸಿ ಅರಣ್ಯ ಇಲಾಖೆಗೆ ಒಪ್ಪಿಸಬೇಕು. ಇಲ್ಲದಿದ್ದರೆ ನಾವೂ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂಬ ಅಂತಿಮ ನೋಟಿಸ್ ನೀಡಲಾಗಿದೆ. ರೆಸಾರ್ಟ್ ಸಂತೋಷ್ ಲಾಡ್ ಅವರ ಸಹೋದರ ಅಶೋಕ್ ಲಾಡ್ ಅವರ ಹೆಸರಿನಲ್ಲಿದೆ. ಅಶೋಕ್ ಲಾಡ್ ಪತ್ನಿ ರಜನಿ ಲಾಡ್ ಹೆಸರಲ್ಲಿ ರೆಸಾರ್ಟ್ ಇದ್ದರೂ ಅನಿಲ್ ಲಾಡ್ ಅವರೇ ರೆಸಾರ್ಟ್ ಉಸ್ತುವಾರಿ ವಹಿಸಿದ್ದರು. 

Share this Story:

Follow Webdunia kannada