Select Your Language

Notifications

webdunia
webdunia
webdunia
webdunia

ರೈತರ ಆತ್ಮಹತ್ಯೆ ರಾಜಕೀಯಗೊಳಿಸುತ್ತಿರುವ ಕುಮಾರಸ್ವಾಮಿ: ರಮ್ಯಾ ಟೀಕೆ

ರೈತರ ಆತ್ಮಹತ್ಯೆ ರಾಜಕೀಯಗೊಳಿಸುತ್ತಿರುವ ಕುಮಾರಸ್ವಾಮಿ:  ರಮ್ಯಾ ಟೀಕೆ
ಬೆಂಗಳೂರು , ಬುಧವಾರ, 17 ಫೆಬ್ರವರಿ 2016 (11:26 IST)
ಮಂಡ್ಯದಲ್ಲಿ ರಮ್ಯಾ ಮತ್ತು ಕುಮಾರಸ್ವಾಮಿ ನಡುವೆ ಮಾತಿನ ಸಮರ ಮುಂದುವರಿದಿದ್ದು, ರೈತರ ಆತ್ಮಹತ್ಯೆಯನ್ನು ಕುಮಾರಸ್ವಾಮಿ ಈ ರೀತಿ ತಿರುಗಿಸಿದ್ದು ತುಂಬಾ ತಪ್ಪು. ಪ್ರತಿಯೊಂದು ಹಂತದಲ್ಲೂ ನಾನು ರೈತರ ಪರವಾಗಿ ಮಾತನಾಡಿದ್ದೇನೆ. ಆದರೆ ಕುಮಾರಸ್ವಾಮಿ ರೈತರ ಆತ್ಮಹತ್ಯೆಯನ್ನು ರಾಜಕೀಯಕ್ಕೆ ಎಳೆದುತರುತ್ತಿರುವ  ಧೋರಣೆಯಿಂದ  ತಮಗೆ ತುಂಬಾ ನೋವಾಗಿದೆ.

 ಕುಮಾರ ಸ್ವಾಮಿ ಕೂಡ ಚಿತ್ರರಂಗದಲ್ಲಿ ತೊಡಗಿಸಿಕೊಂಡವರು. ಅವರ ಪತ್ನಿ ರಾಧಿಕಾ ಕೂಡ ಚಿತ್ರರಂಗದಲ್ಲಿದ್ದಾರೆ. ಕುಮಾರಸ್ವಾಮಿ ಕೂಡ ಚಿತ್ರನಿರ್ಮಾಪಕರು. ಅವರ ಮಗ ಕೂಡ ಚಿತ್ರರಂಗಕ್ಕೆ ಇಳಿದಿದ್ದಾರೆ.  ಅವರು ತಾವು ಸರಳವ್ಯಕ್ತಿತ್ವ ಎಂದು ಬಿಂಬಿಸಲು ಹೊರಟಿದ್ದಾರೆ. ಮೊದಲು ತಮ್ಮನ್ನು ಅವರು ತಿದ್ದಿಕೊಳ್ಳಲಿ ಎಂದು ರಮ್ಯಾ ಹೇಳಿದರು. ಚಿತ್ರರಂಗದಲ್ಲಿದ್ದ  ಒಬ್ಬ ಮಹಿಳೆಯ ಬಗ್ಗೆ  ಅವರು ಈ ರೀತಿ ಮಾತನಾಡಬಾರದು ಎಂದು ಹೇಳಿದ್ದಾರೆ. 
 
 16ನೇ ತಾರೀಖು ಪಾಂಡವಪುರ ಚುನಾವಣೆ ಪ್ರಚಾರದಲ್ಲಿ ಮಾತನಾಡುತ್ತಿದ್ದ ಕುಮಾರಸ್ವಾಮಿ ಜಿಲ್ಲೆಗೆ ರಮ್ಯಾ ಅವರು ಕಾಲಿಟ್ಟ ನಂತರ 100 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದೇ ಅವರು ನೀಡಿದ ಕೊಡುಗೆ.  ರಮ್ಯಾ ಕಾಲ್ಗುಣವೇ ಸರಿಯಿಲ್ಲ ಎಂದು ವಾಗ್ದಾಳಿ ಮಾಡಿದ್ದರು. ರಮ್ಯಾ ನಟಿಯಾಗಿರುವುದರಿಂದ ಅವರನ್ನು ಜನರು ನಂಬಬಾರದು ಎಂದು ಕುಮಾರಸ್ವಾಮಿ ಹೇಳಿದ್ದರು. 

Share this Story:

Follow Webdunia kannada