Webdunia - Bharat's app for daily news and videos

Install App

ಕುಮಾರಸ್ವಾಮಿ ಹತಾಶರಾಗಿ ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ; ವಿಎಸ್ ಉಗ್ರಪ್ಪ ಆಕ್ರೋಶ

Webdunia
ಮಂಗಳವಾರ, 12 ಅಕ್ಟೋಬರ್ 2021 (17:57 IST)
ಬೆಂಗಳೂರು : ಕುಮಾರಸ್ವಾಮಿ ಬಗ್ಗೆ ವೈಯುಕ್ತಿಕ ಗೌರವವಿದೆ. ಆದರೆ ಅವರಿಗೆ ಹತಾಶೆ ಕಾಡುತ್ತಿದೆ. ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಅವರು ಜನತೆ ವಿಶ್ವಾಸ ಗಳಿಸುವಲ್ಲಿ ವಿಫಲರಾಗಿದ್ದಾರೆ. ಬೇರೆಯವರ ಮೇಲೆ ಕೆಸೆರೆರಚುತ್ತಿದ್ದಾರೆ.

ಸರ್ಕಾರ ತೆಗೆಯಲು ಸಿದ್ದು ಕಾರಣ ಅಂತಾರೆ. ಆಪರೇಷನ್ ಕಮಲದ ಬಗ್ಗೆ ಚರ್ಚೆಯಾಗುತ್ತದೆ. ಆಗ ಕುಮಾರಸ್ವಾಮಿ ವಿದೇಶಕ್ಕೆ ಹೋಗ್ತಾರೆ. ಕುಮಾರಸ್ವಾಮಿ ವಿರುದ್ಧ ಅವಿಶ್ವಾಸ ಮಂಡಿಸ್ತಾರೆ. ಆಗಲೂ ಕಾಂಗ್ರೆಸ್ ಕಾರಣ ಅಂದಿರಲಿಲ್ಲ. ಆದರೆ ಈಗ ಕಾಂಗ್ರೆಸ್ ಕಾರಣ ಅನ್ನೋದು ಸರಿಯಲ್ಲ ಎಂದು ಮಾಜಿ ಸಂಸದ ವಿಎಸ್ ಉಗ್ರಪ್ಪ ಅವರು ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಆಕ್ರೋಶ ಹೊರಹಾಕಿದರು.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಗ್ರಪ್ಪ ಅವರು,  ಬಿಎಸ್ ವೈ ಆಪ್ತರ ಮೇಲಿನ ಐಟಿ ದಾಳಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದರು. ನೀರಾವರಿ ಇಲಾಖೆಯಲ್ಲಿದೊಡ್ಡ ಹಗರಣ ನಡೆದಿದೆ. 15 ಸಾವಿರ ಕೋಟಿ ಹಗರಣ ನಡೆದಿದೆ. ಪ್ರತಿಪಕ್ಷಗಳ ಮೇಲೆ ಇಡಿ ದಾಳಿಯಾದರೆ ಮಾಹಿತಿ ಬಹಿರಂಗವಾಗುತ್ತದೆ. ಅಲ್ಲಿ ಎಷ್ಟು ಸಿಕ್ಕಿತ್ತು ಎಂಬುದನ್ನ ರಿಲೀಸ್ ಮಾಡ್ತಿದ್ರು. ಇಡಿ ಅಧಿಕಾರಿಗಳು ರಿಲೀಸ್ ಮಾಡ್ತಿದ್ರು. ಈಗ 18500 ಕೋಟಿ ಅಕ್ರಮ ನಡೆದಿದೆ. ದಾಳಿ ವೇಳೆ ಇದೆಲ್ಲವೂ ಪತ್ತೆಯಾಗಿದೆ. ಯಾಕೆ ಇಡಿ, ಐಟಿ ಮಾಹಿತಿ ಬಹಿರಂಗ ಮಾಡಿಲ್ಲ. ಐಟಿ ಅಧಿಕಾರಿಗಳು ಈ ಮಾಹಿತಿ ಬಹಿರಂಗಪಡಿಸಬೇಕು. ಬಿಎಸ್ವೈ ಆಪ್ತರ ಮೇಲಿನ ದಾಳಿ ಮಾಹಿತಿ ರಿಲೀಸ್ ಮಾಡಿ. ಈ ಹಗರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಿ. ಹೈಕೋರ್ಟ್ ಸಿಟ್ಟಿಂಗ್ ಜಡ್ಜ್ ನೇತೃತ್ವದಲ್ಲಿ ತನಿಖೆ ಮಾಡಿಸಿ. ಇದರ ಬಗ್ಗೆ ಕುಮಾರಸ್ವಾಮಿ ಮಾತನಾಡಲಿ ಎಂದು ಆಗ್ರಹಿಸಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

COVID19: ಲಾಕ್ ಡೌನ್ ಬರುತ್ತಾ, ಶಾಲೆಗೆ ರಜೆ ಇರುತ್ತಾ: ಸಿಎಂ ಸಿದ್ದರಾಮಯ್ಯ ಸಭೆಯಲ್ಲಿ ಏನಾಯ್ತು

Mangalore: ಇದು ಹೊಳೆ ಅಲ್ಲ ಪಂಪ್ ವೆಲ್ ಮಾರಾಯ್ರೆ.. ವೈರಲ್ ವಿಡಿಯೋ ನೋಡಿ

ದೇಶವನ್ನೇ ಕಂಟ್ರೋಲ್ ಮಾಡುವ ಫ್ರೆಂಚ್‌ ಅಧ್ಯಕ್ಷನಿಗೂ ಬಿಡದ ಪತ್ನಿಯ ಕಾಟ, Viral Video

Covid 19: ಅಂದಿನ ಕೊವಿಡ್ ಪರಿಸ್ಥಿತಿ ಬರಬಾರದು ಅಂದರೆ ಇದನ್ನು ತಪ್ಪದೇ ಪಾಲಿಸಿ

ಪೊಲೀಸರ ಯಡವಟ್ಟಿಗೆ ಪ್ರಾಣ ಕಳೆದುಕೊಂಡ ಬಾಲಕಿ, ಮೂವರು ಎಎಸ್‌ಐಗಳ ಅಮಾನತು

ಮುಂದಿನ ಸುದ್ದಿ
Show comments