Webdunia - Bharat's app for daily news and videos

Install App

ವಾಚ್ ಗಿಫ್ಟ್ ಕೊಟ್ಟವರ ಹೆಸರು ಬಹಿರಂಗಪಡಿಸಲು ಕುಮಾರಸ್ವಾಮಿ ಒತ್ತಾಯ

Webdunia
ಶನಿವಾರ, 13 ಫೆಬ್ರವರಿ 2016 (18:54 IST)
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಧರಿಸಿರುವ ವಾಚ್ ಯಾರು ಉಡುಗೊರೆ ನೀಡಿದ್ದಾರೆ ಎಂದು ಬಹಿರಂಗಪಡಿಸುವಂತೆ ಜೆಡಿಎಸ್ ನಾಯಕ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.  ಗಿಫ್ಟ್ ಕೊಡುವುದು ಕೂಡ ಕಿಕ್‌‍ಬ್ಯಾಕ್ ಇದ್ದಂತೆ. ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ಅಷ್ಟೊಂದು ದುಬಾರಿ ದರದ ವಾಚ್ ಯಾರೂ ಗಿಫ್ಟ್ ನೀಡುವುದಿಲ್ಲ. ಆದ್ದರಿಂದ ಗಿಫ್ಟ್ ಕೊಟ್ಟವರ ಹೆಸರನ್ನು ಸಿಎಂ ಬಹಿರಂಗಪಡಿಸಲಿ, ಇಲ್ಲದಿದ್ದರೆ ನಾನೇ ಬಹಿರಂಗಪಡಿಸಬೇಕಾಗುತ್ತದೆ ಎಂದು ಕುಮಾರಸ್ವಾಮಿ ಎಚ್ಚರಿಸಿದರು.

ವಜ್ರಖಚಿತ ಹ್ಯೂಬ್ಲೋಟ್ ಕಂಪನಿಯ ಗಡಿಯಾರ 50 ಲಕ್ಷದಿಂದ 60 ಲಕ್ಷ  ಬೆಲೆಬಾಳುವುದಾಗಿದೆ ಎಂದು ಕುಮಾರಸ್ವಾಮಿ ಆರೋಪಿಸಿದರು.  ಕುಮಾರಸ್ವಾಮಿ ಮಗ 5 ಕೋಟಿ ಬೆಲೆಬಾಳುವ ಕಾರು ಖರೀದಿಸಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, ತಮ್ಮ ಮಗ ಖಾಸಗಿ ಕಂಪನಿಯ ಉಪನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದು, ಅದರಿಂದ ಸಂಪಾದಿಸಿದ ಹಣದಲ್ಲಿ ಕಾರು ಖರೀದಿಸಿದ್ದಾನೆ ಎಂದು ಉತ್ತರಿಸಿದ್ದರು.

ಕೋಟ್ಯಂತರ ರೂ. ಸಾಲ ಮಾಡಿ ಚಿತ್ರನಿರ್ಮಾಣ ಮಾಡುತ್ತಿರುವುದಾಗಿಯೂ ಅವರು ಸ್ಪಷ್ಟಪಡಿಸಿದ್ದರು. ವಾಚ್ ವಿವಾದ ದಿನದಿಂದ ದಿನಕ್ಕೆ ಹೊಸ ರೂಪ ಪಡೆಯುತ್ತಿದ್ದು, ವಿವಾದ ಕೊನೆಗೊಳ್ಳುವ ಲಕ್ಷಣ ಕಾಣಿಸುತ್ತಿಲ್ಲ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments