ಪೊಲೀಸ್ ಮಹಾ ಸಂಘದ ಅಧ್ಯಕ್ಷ ಶಶಿಧರ್ ಅವರ ಸಿಪಾಯಿ ದಂಗೆ ಕುರಿತು ಪ್ರಶ್ನಿಸಿದ ಪತ್ರಕರ್ತರಿಗೆ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಧಮಕಿ ಹಾಕಿದ ಘಟನೆ ವರದಿಯಾಗಿದೆ.
ವಿಕಾಸಸೌಧದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರೊಬ್ಬರು ಪೊಲೀಸ್ ಮಹಾ ಸಂಘದ ಅಧ್ಯಕ್ಷ ಶಶಿಧರ್ ಅವರ ಬಂಧನದ ಕುರಿತು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಅವರನ್ನು ಪ್ರಶ್ನಿಸಿದ್ದಾರೆ. ಅದಕ್ಕೆ ಉತ್ತರಿಸಿದ ಪರಮೇಶ್ವರ್ ಅವರು ಹಾಗಾದರೇ ನೀವು ಸಿಪಾಯಿ ದಂಗೆಯನ್ನು ಬೆಂಬಲಿಸುತ್ತಿರಾ? ಎಂದು ಮರುಪ್ರಶ್ನಿಸಿದಾಗ ಪತ್ರಕರ್ತ ಸಿಪಾಯಿದಂಗೆಯಿಂದಲೇ ನಮಗೆ ಸ್ವಾತಂತ್ರ ಸಿಕ್ಕಿದ್ದಲ್ಲವೇ ಎಂದು ಗೃಹ ಸಚಿವರಿಗೆ ಸವಾಲ್ ಎಸೆದಿದ್ದಾರೆ.
ಇದರಿಂದ ತಾಳ್ಮೆ ಕಳೆದುಕೊಂಡ ಗೃಹ ಸಚಿವರು ಪೊಲೀಸ್ ಮಹಾ ಸಂಘದ ಅಧ್ಯಕ್ಷ ಶಶಿಧರ್ ನಿಮಗಾಗಿ ಕಾಯುತ್ತಿರುತ್ತಾರೆ. ನೀವು ಕೂಡಾ ಜೈಲಿಗೆ ಹೋಗುತ್ತೀರಾ ಎಂದು ಪತ್ರಕರ್ತರ ಮೇಲೆ ಕಿಡಿಕಾರಿದ್ದಾರೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.