ಶಿಕ್ಷಕಿ ಹುದ್ದೆ ಕೊಡಿಸುವುದಾಗಿ ಸೌದಿಗೆ ಕರೆದೊಯ್ದು ಮಾಡಿದ್ದೇನು ಗೊತ್ತಾ..?

Webdunia
ಮಂಗಳವಾರ, 1 ಆಗಸ್ಟ್ 2017 (13:13 IST)
ಅರೇಬಿಕ್ ಶಿಕ್ಷಕಿ ಹುದ್ದೆ ಕೊಡಿಸುವುದಾಗಿ ಕೊಪ್ಪಳ ಮೂಲದ ಮಹಿಳೆಯನ್ನ ಸೌದಿ ಅರೇಬಿಯಾಗೆ ಕರೆದೊಯ್ದು ಕಸ ಗುಡಿಸುವ ಕೆಲಸ ಕೊಟ್ಟು ಹಿಂಸೆ ನೀಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.

ಮಂಗಳೂರು ಮೂಲದ ಏಜೆಂಟ್ ಶಂಶೀರ್ ಎಂಬಾತ ಬಾಬಾಜಾನ್ ಪತ್ನಿ ಚಾಂದ್ ಸುಲ್ತಾನಾ ಎಂಬುವವರಿಗೆ 40 ಸಾವಿರ ರೂ. ಸಂಬಳದ ಅರೇಬಿಕ್ ಬೋಧನಾ ಕೆಲಸ ಕೊಡಿಸುವುದಾಗಿ ಕರೆದೊಯ್ದಿದ್ದಾನೆ. ಇದಕ್ಕಾಗಿ ಶಂಶೀರ್`ಗೆ ಬಾಬಾಜಾನ್ 50 ಸಾವಿರ ರೂ. ಹಣವನ್ನೂ ನೀಡಿದ್ದಾನೆ. ಆದರೆ, ಸೌದಿಯಲ್ಲಿ ಮಹಿಳೆಗೆ ಕಸ ಗುಡಿಸುವ ಕೆಲಸ ಕೊಟ್ಟಿರುವುದಲ್ಲದೆ, ಕೊಠಡಿಯಲ್ಲಿ ಕೂಡಿ ಹಾಕಿ ಕೇವಲ ಬ್ರೆಡ್ ಪೀಸ್`ಗಳನ್ನ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಬೇರೆಯವರ ಸಹಾಯದೊಂದಿಗೆ ಪತಿಗೆ ಕರೆ ಮಾಡಿದ್ದ ಚಾಂದ್ ಸುಲ್ತಾನಾ ತನ್ನ ಸ್ಥಿತಿ ಬಗ್ಗೆ ಪತಿಗೆ ತಿಳಿಸಿದ್ದಾಳೆ.

ತನ್ನನ್ನ ಊರಿಗೆ ಕಳುಹಿಸಿ ಎಂದು ಚಾಂದ್ ಸುಲ್ತಾನಾಮಾಲೀಕನನ್ನ ಕೇಳಿದರೆ ಏಜೆಂಟರ್`ಗೆ 4 ಲಕ್ಷ ರೂ. ನೀಡಿದ್ದೇನೆ. ಅದನ್ನ ಕೊಟ್ಟು ಹೋಗು ಎನ್ನುತ್ತಿದ್ದಾರಂತೆ. ಘಟನೆ ಬಗ್ಗೆ ಸಂಸದ ಕರಡಿ ಸಂಗಣ್ಣ ಗಮನ ಸೆಳೆದಿದ್ದು, ನೆರವಿನ ಭರವಸೆ ನೀಡಿದ್ದಾರೆಂದು ತಿಳಿದುಬಂದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನನ್ನ ಅಕ್ಕನನ್ನು ಮಾರಾಟ ಮಾಡ್ಬೇಡಿ, ಅಕ್ಕನ ಮಾತು ಕೇಳಿದ್ರೆ ಕಣ್ಣೀರು ಬರುತ್ತೆ

ವಿಧಾನಸಭೆ ಚುನಾವಣೆ, ಬಿಹಾರದಲ್ಲಿ ರಾಹುಲ್ ಗಾಂಧಿ ಮೊದಲ ರ್ಯಾಲಿ

ದ್ವೇಷ ಭಾಷಣ ಮಾಡುವವರ ಬಗ್ಗೆ ಮಂಗಳೂರಿನಲ್ಲಿ ಗುಡುಗಿದ ಸಿದ್ದರಾಮಯ್ಯ

ಮಹತ್ವದ ಪೋಸ್ಟ್ ಹಂಚಿಕೊಂಡ ಶ್ರೀರಾಮ ಜನ್ಮಭೂಮಿ ಟ್ರಸ್ಟ್‌

ತನ್ನವರನ್ನು ಕಳೆದುಕೊಂಡ ಸಂತ್ರಸ್ತರ ಕುಟುಂಬದ ಜತೆ ವಿಜಯ್ ನಡೆ ಹೇಗಿತ್ತು ಗೊತ್ತಾ

ಮುಂದಿನ ಸುದ್ದಿ
Show comments