Select Your Language

Notifications

webdunia
webdunia
webdunia
webdunia

ಭಕ್ತರ ಮೇಲೆ ಹರಿದ ಟ್ಯಾಂಕರ್: ಮೂರು ಸಾವು

ಭಕ್ತರ ಮೇಲೆ ಹರಿದ ಟ್ಯಾಂಕರ್: ಮೂರು ಸಾವು
ಕೋಲಾರ , ಬುಧವಾರ, 23 ಜುಲೈ 2014 (08:59 IST)
ಜಾತ್ರಾ ನಿಮಿತ್ತ ದೇವಿಯ ಮೂರ್ತಿಯನ್ನು ಹೊತ್ತೊಯ್ಯುತ್ತಿದ್ದ ಭಕ್ತರ ಮೇಲೆ ವೇಗವಾಗಿ ಬಂದ ಟ್ಯಾಂಕರ್ ಒಂದು ಹರಿದು ಮೂರು ಜನ ಮೃತಪಟ್ಟು 15ಕ್ಕೂ ಹೆಚ್ಚು ಜನ ತೀವೃವಾಗಿ ಗಾಯಗೊಂಡ ಘಟನೆ ಕೋಲಾರದಲ್ಲಿ ನಡೆದಿದೆ. 

ಶ್ರೀನಿವಾಸಪುರ ತಾಲ್ಲೂಕಿನ ಕಡಪದ ಬೆಂಗಳೂರು- ಕಡಪ ಹೆದ್ದಾರಿಯಲ್ಲಿ  ನಡೆದ ಈ ದುರ್ಘಟನೆಯಲ್ಲಿ ಶ್ರೀರಾಮ ರೆಡ್ಡಿ ಎಂಬುವವರು ಸ್ಥಳದಲ್ಲೇ ಸಾವನ್ನಪ್ಪಿದರೆ, ಮಂಜುನಾಥ್ ಮತ್ತು ಕಿಶೋರ್ ಎಂಬುವವರು  ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. 15 ಕ್ಕೂ ಹೆಚ್ಚು ಮಂದಿಗೆ ಗಾಯವಾಗಿದ್ದು ಅವರನ್ನು ಸರಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ.
 
ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಟ್ಯಾಂಕರ್ ಚಾಲಕ ಪರಾರಿಯಾಗಿದ್ದಾನೆ. 

Share this Story:

Follow Webdunia kannada