7 ವರ್ಷದ ಹಿಂದೆ ನಡೆದ ಕೊಲೆ ಕೇಸ್ ನ್ನ ಮತ್ತೆ ಕೈಗೆತ್ತಿಕೊಂಡ ಕೋಲಾರ ಪೊಲೀಸರು

Webdunia
ಭಾನುವಾರ, 9 ಅಕ್ಟೋಬರ್ 2022 (19:40 IST)
ಕೋಲಾರದ ಮುಳಬಾಗಿಲು ನಗರದ ಪೇಂಟರ್ ರಮೇಶ್ (31) ಕೊಲೆ ಪ್ರಕರಣವನ್ನ ಮತ್ತೆ ಪೊಲೀಸರು ರೀ ಓಪನ್ ಮಾಡಿದ್ದಾರೆ.ಮರು ಮರಣೋತ್ತರ ಪರೀಕ್ಷೆ ನಡೆಸಲು ಪೊಲೀಸರು ಶವವನ್ನ ಹೊರತೆಗೆದಿದ್ದಾರೆ.ಕೋಲಾರದ ಮುಳಬಾಗಿಲು ನಗರ ಹೊರವಲಯದಲ್ಲಿ 2015 ರ  ಏಪ್ರಿಲ್ 30 ರಂದು ಸುಪಾರಿ ಕೊಲೆ ನಡೆದಿತ್ತು.ಪೇಂಟರ್ ರಮೇಶ್ ಮರಣೋತ್ತರ ಪರೀಕ್ಷೆಗಾಗಿ ಪೊಲೀಸರು ಕೆರೆಯಲ್ಲಿನ ನೀರು ಖಾಲಿ ಮಾಡಿದ್ದಾರೆ.7 ವರ್ಷದ ಹಿಂದೆ ನಡೆದ ಕೊಲೆ ಪ್ರಕರಣದ ತನಿಖೆಯನ್ನ ಕೋಲಾರ ಪೊಲೀಸ್ ಇಲಾಖೆ ಈಗ ತನಿಖೆ ನಡೆಸುತ್ತಿದ್ದಾರೆ.
 
ಇನ್ನೂ ಸೂರಿ ಹಾಗೂ ಚೇತನ್ ಎನ್ನುವರಿಗೆ ಸುಪಾರಿ ಕೊಟ್ಟು ಕೊಲೆ‌ ಮಾಡಿಸಿದ್ದ ಮೃತ ನಗರಸಭೆ ಸದಸ್ಯ ಜಗನ್ಮೋಹನ ರೆಡ್ಡಿ.ಮುಳಬಾಗಿಲು ತಹಶೀಲ್ದಾರ್ ಶೋಭಿತಾ, ತನಿಖಾಧಿಕಾರಿ ವಸಂತ್,  ಕುಟುಂಬಸ್ಥರಾದ ಪೈಂಟರ್ ರಮೇಶ್ ಅಣ್ಣ ಮಂಜುನಾಥ್, ಅಕ್ಕ ಪುಷ್ಪ ಸಮ್ಮುಖದಲ್ಲಿ ವೈದ್ಯರು  ಈಗ ಮರು ಮರಣೋತ್ತರ ಪರೀಕ್ಷೆ  ನಡೆಸುತ್ತಿದ್ದಾರೆ.ಜೆಸಿಬಿ ಸಹಾಯದಿಂದ ಶವ ಹೊರತೆಗೆದು ಮತ್ತೊಮ್ಮೆ ಶವಸಂಸ್ಕಾರವನ್ನ ಕುಟುಂಬಸ್ಥರೇ ನೆರವೇರಿಸಿದಾರೆ.ಜಗನ್ಮೋಹನ್ ರೆಡ್ಡಿ ಕೊಲೆ ಕೇಸ್ ತನಿಖೆ ವೇಳೆ  ಅಮಾಯಕ ಪೇಂಟರ್ ರಮೇಶ್ ಕೊಲೆ ಕೇಸ್ ಬೆಳಕಿಗೆ ಬಂದಿದ್ದು.ಪ್ರಕರಣ ಸಂಬಂಧ ಈಗಾಗಲೇ ಇಬ್ಬರು ಆರೋಪಿಗಳನ್ನ  ಪೊಲೀಸರು ಬಂಧಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಜಾತಿ ಗಣತಿಯಲ್ಲಿ ಗೊಂದಲವೇ ಹೆಚ್ಚಾಗಿದೆ: ಬಿವೈ ವಿಜಯೇಂದ್ರ

ಹಿಂದೂ ಯುವತಿಯರನ್ನು ಗರ್ಭಿಣಿಯರಾಗಿ ಮಾಡುವುದೇ ನನ್ನ ಕೆಲಸ: ಶಾದ್ ಸಿದ್ದಿಕಿ

ನನ್ನ ಒಬ್ಬನನ್ನು ಸಮೀಕ್ಷೆ ಮಾಡಲು ಇಷ್ಟೊಂದು ಜನ ಬೇಕಾ: ವಿ ಸೋಮಣ್ಣ ಕ್ಲಾಸ್

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಕೆಮ್ಮಿನ ಸಿರಪ್ ಗೆ ಮಕ್ಕಳ ಸಾವು ಕೇಸ್: ಪಟ್ಟಿಯಲ್ಲಿಲ್ಲದಿದ್ದರೂ ರೋಗಿಗಳಿಗೆ ನೀಡುತ್ತಿದ್ದ ವೈದ್ಯ ಅರೆಸ್ಟ್

ಮುಂದಿನ ಸುದ್ದಿ
Show comments