Select Your Language

Notifications

webdunia
webdunia
webdunia
webdunia

ಗಾಂಧಿ ಹುಟ್ಟಿದ ದಿನ ಗೊತ್ತಿಲ್ಲದ ಶಿಕ್ಷಕರಿಗೆ ಕಿಮ್ಮನೆ ಕ್ಲಾಸ್ ತಗೊಂಡ್ರು ಸುಮ್ಮನೆ

ಗಾಂಧಿ ಹುಟ್ಟಿದ ದಿನ ಗೊತ್ತಿಲ್ಲದ  ಶಿಕ್ಷಕರಿಗೆ  ಕಿಮ್ಮನೆ ಕ್ಲಾಸ್ ತಗೊಂಡ್ರು ಸುಮ್ಮನೆ
ಬೆಂಗಳೂರು , ಶುಕ್ರವಾರ, 19 ಸೆಪ್ಟಂಬರ್ 2014 (15:34 IST)
ವರ್ಗಾವಣೆ ಕೇಳಲು ಬಂದ ಕೋಲಾರ ಮೂಲದ  ಶಿಕ್ಷಕರಿಗೆ ಕ್ಲಾಸ್ ತೆಗೆದುಕೊಂಡ ಸಚಿವ ಕಿಮ್ಮನೆ ರತ್ನಾಕರ್, ಶಿಕ್ಷಕರು ತಬ್ಬಿಬ್ಬಾಗುವಂತೆ ಮಾಡಿದರು. ಗಾಂಧೀಜಿ ಹುಟ್ಟಿದ ದಿನಾಂಕ, ವಿವೇಕಾನಂದ ಜನ್ಮ ದಿನ, ತತ್ವಜ್ಞಾನಿಗಳ ಹೆಸರನ್ನು ಕಿಮ್ಮನೆ ಕೇಳಿದಾಗ ಶಿಕ್ಷಕರು ಉತ್ತರಿಸಲಾಗದೇ ತಡವರಿಸಿ,  ಸಚಿವರ ಪ್ರಶ್ನೆಗಳಿಗೆ ತಪ್ಪು ಉತ್ತರಗಳನ್ನು ನೀಡಿದರು.

ಗಾಂಧಿ ಹುಟ್ಟಿದ ದಿನ ಗೊತ್ತಿಲ್ಲ. ಗಾಂಧಿಯ ಎಕ್ಸ್‌‍ಪೆರಿಮಿಂಟ್ ವಿತ್ ಟ್ರೂತ್ ಓದಿಲ್ಲ. ಸ್ವಾಮಿ ವಿವೇಕಾನಂದ ಹುಟ್ಟಿದ್ದು ಯಾವಾಗ ಹೇಳಿ ಎಂದು ಕೇಳಿದರೆ ಅದೂ ಶಿಕ್ಷಕರಿಗೆ ಗೊತ್ತಿರಲಿಲ್ಲ. ಸಾಮಾನ್ಯ ಜ್ಞಾನ ಇಲ್ಲದಿರುವ ನೀವು ಮಕ್ಕಳಿಗೆ ಏನು ಪಾಠ ಮಾಡ್ತೀರಿ ಎಂದು ಕಿಮ್ಮನೆ ಕೇಳಿದಾಗ ವರ್ಗಾವಣೆ ಕೇಳಲು ಬಂದಿದ್ದ ಶಿಕ್ಷಕರು ವರ್ಗಾವಣೆ ವಿಷಯದ ಪ್ರಸ್ತಾಪ ಮಾಡದೇ ಬಾಯಿಮುಚ್ಚಿಕೊಂಡಿದ್ದರು.

ಕಿಮ್ಮನೆ  ಸುಮ್ಮನೇ ಇರದೇ ಮತ್ತೆ ಶಿಕ್ಷಕರಿಗೆ ಮಂಗಳಾರತಿ ಮಾಡಲಾರಂಭಿಸಿ, ಶಿಕ್ಷಕರಾಗಿ ನೀವು ಮಕ್ಕಳಿಗೆ ಏನನ್ನು ಕಲೀಸುತ್ತೀರಿ ಎಂದು ಮತ್ತೊಮ್ಮೆ ರೇಗಿದರು. 

Share this Story:

Follow Webdunia kannada