Select Your Language

Notifications

webdunia
webdunia
webdunia
webdunia

ನೂತನ ಅಬಕಾರಿ ನೀತಿಯನ್ನು ಎತ್ತಿ ಹಿಡಿದ ಕೇರಳ ಹೈಕೋರ್ಟ್

ನೂತನ ಅಬಕಾರಿ ನೀತಿಯನ್ನು ಎತ್ತಿ ಹಿಡಿದ ಕೇರಳ ಹೈಕೋರ್ಟ್
ತಿರುವನಂತಪುರಂ , ಮಂಗಳವಾರ, 31 ಮಾರ್ಚ್ 2015 (18:35 IST)
ಕೇರಳ ಸರ್ಕಾರ ಜಾರಿಗೊಳಿಸಿದ್ದ ನೂತನ ಅಬಕಾರಿ ನೀತಿಯನ್ನು ಇಲ್ಲಿನ ಹೈಕೋರ್ಟ್ ಎತ್ತಿ ಹಿಡಿದಿದ್ದು, ಪಂಚತಾರಾ ಹೋಟೆಲ್‌ಗಳಿಗೆ ಮದ್ಯ ಮಾರಾಟಕ್ಕೆ ಅನುಮತಿ ನೀಡಿ ಆದೇಶಿಸಿದೆ.  
 
ಹೈಕೋರ್ಟ್ ನ ಏಕಸದಸ್ಯರಿದ್ದ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದ್ದು, ತನ್ನ ಆದೇಶದಲ್ಲಿ ಸರ್ಕಾರ ಕೈಗೊಂಡಿರುವ ನಿರ್ಧಾರ ಉತ್ತಮವಾಗಿದೆ ಎಂದು ಅಭಿಪ್ರಾಯಪಟ್ಟಿದ್ದು, ಪಂಚತಾರಾ ಹೋಟೆಲ್‌ಗಳಿಗೆ ಮದ್ಯ ಮಾರಾಟ ಮಾಡಲು ಅನುಮತಿ ನೀಡಿದ್ದು, ಇತರೆ ಹೋಟೆಲ್‌ಗಳಿಗೆ ನಿರ್ಬಂಧ ಹೇರಿದೆ. 
 
ಇತ್ತೀಚೆಗೆ ಸರ್ಕಾರವು ನೂತನ ಅಬಕಾರಿ ನೀತಿಯನ್ನು ಜಾರಿಗೊಳಿಸಿತ್ತು. ಸರ್ಕಾರದ ಈ ನೂತನ  ನೀತಿಯನ್ನು ಪ್ರಶ್ನಿಸಿ ರಾಜ್ಯ ಮದ್ಯ ಮಾರಾಟಗಾರರ ಒಕ್ಕೂಟ ಹೈಕೋರ್ಟ್ ಮೆಟ್ಟಿಲೇರಿತ್ತು. ಈ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ನ್ಯಾಯಾಲಯ ಈ ಆದೇಶ ನೀಡುವ ಮೂಲಕ ಸರ್ಕಾರದ ನೀತಿಯನ್ನು ಎತ್ತಿ ಹಿಡಿದಿದೆ. 

Share this Story:

Follow Webdunia kannada