Select Your Language

Notifications

webdunia
webdunia
webdunia
webdunia

ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಜಗನ್ನಾಥ ಶೆಟ್ಟಿ ವಿಧಿವಶ

ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಜಗನ್ನಾಥ ಶೆಟ್ಟಿ ವಿಧಿವಶ
ಬೆಂಗಳೂರು , ಶುಕ್ರವಾರ, 12 ಫೆಬ್ರವರಿ 2016 (15:55 IST)
ರಾಜ್ಯ ಹೈಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ಕೆದಂಬಾಡಿ ಜಗನ್ನಾಥ ಶೆಟ್ಟಿ ಇಂದು ಮುಂಜಾನೆ 9.30 ರ ಸುಮಾರಿಗೆ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು.  ಪುತ್ರ ರಮಾನಂದ್ ರೈ, ಪುತ್ರಿ ಪ್ರೊ. ಪುತ್ರಿ ರೇಖಾ ರೈ ಮತ್ತು ಅಪಾರ ಬಂಧುಬಳಗವನ್ನು ಅವರು ಅಗಲಿದ್ದಾರೆ. 

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಮೂಲದವರಾದ ನ್ಯಾಯಮೂರ್ತಿ ಜಗನ್ನಾಥ್‌ ಅವರು ಹಾವೇರಿ ಗೋಲಿಬಾರ್‌ ಮತ್ತು ಭಟ್ಕಳದಲ್ಲಿ ನಡೆದ ಕೋಮು ಗಲಭೆಗೆ ಸಂಬಂಧಿಸಿದ ತನಿಖಾ ಆಯೋಗದ ಅಧ್ಯಕ್ಷರಾಗಿ ಸಹ ಕಾರ್ಯ ನಿರ್ವಹಿಸಿದ್ದರು. 
 
ಅವರ ಪುತ್ರ ಡಾ.ರಮಾನಂದ್‌ ಶೆಟ್ಟಿ  ವೆಸ್ಟ್‌ ಇಂಡೀಸ್‌ನಲ್ಲಿದ್ದು ಅವರು ಬೆಂಗಳೂರಿಗೆ ಮರಲಿದ ಬಳಿಕ ಅಂತ್ಯಕ್ರಿಯೆಯನ್ನು ನಡೆಸಲಾಗುತ್ತದೆ ಎಂದು ಕುಟುಂಬ ಮೂಲಗಳು  ತಿಳಿಸಿವೆ. ಸದ್ಯ ಅವರ ದೇಹವನ್ನು ಎಂ.ಎಸ್‌.ರಾಮಯ್ಯ ಆಸ್ಪತ್ರೆಯಲ್ಲಿ ಇರಿಸಲಾಗಿದೆ. 

Share this Story:

Follow Webdunia kannada