Webdunia - Bharat's app for daily news and videos

Install App

ತಮಿಳುನಾಡಿನಲ್ಲಿ ಶುರುವಾದ ಕಾವೇರಿ ಕೂಗು

Webdunia
ಗುರುವಾರ, 12 ಸೆಪ್ಟಂಬರ್ 2019 (15:03 IST)
ಕಾವೇರಿ ನದಿ ಉಳಿವಿಗಾಗಿ ಶುರುವಾಗಿರೋ ಕಾವೇರಿ ಕೂಗು ಇದೀಗ ತಮಿಳುನಾಡಿಗೆ ಪ್ರವೇಶ ಪಡೆದಿದೆ.

ಇಶಾ ಫೌಂಡೇಶನ್'ನ ಜಗ್ಗಿ ವಾಸುದೇವ್ ನೆಡಸುತ್ತಿರುವ ಕಾವೇರಿ ಕೂಗು ಇಂದು ಕರ್ನಾಟಕ ದಾಟಿ ತಮಿಳುನಾಡು ಪ್ರವೇಶಿಸಿದೆ. ಈ ಸಂದರ್ಭದಲ್ಲಿ ವಿಎಚ್'ಪಿ, ಭಜರಂಗದಳ ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರು ಬೈಕ್ ರ್ಯಾಲಿಯನ್ನು ಬಿಳ್ಕೊಟ್ಟರು.

ಇತ್ತ ತಮಿಳುನಾಡಿನ ನಾಗರಿಕರು ಹಾಗೂ ಕಾವೇರಿ ನದಿ ಪಾತ್ರದ ರೈತರು ಬೈಕ್' ರ್ಯಾಲಿಗೆ ಅದ್ದೂರಿ ಸ್ವಾಗತ ಕೋರಿದರು. ತಲಕಾವೇರಿಯಿಂದ ಆರಂಭವಾಗಿರುವ ಕಾವೇರಿ ಕೂಗು ಎಂಬ ಬೈಕ್ ರ್ಯಾಲಿ ಕರ್ನಾಟಕ- ತಮಿಳುನಾಡು ಗಡಿ ಆನೇಕಲ್ ತಾಲೂಕಿನ ಅತ್ತಿಬೆಲೆಗೆ ಆಗಮಿಸಿತು.

ಈ ಸಂದರ್ಭದಲ್ಲಿ ಆನೇಕಲ್ ತಾಲೂಕಿನ ಹಿಂದೂ ಸಂಘಟನೆಗಳ ಕಾರ್ಯಕರ್ತರು, ಬೈಕ್ ರ್ಯಾಲಿಗೆ ಸ್ವಾಗತ ಕೋರಿ ತಮಿಳುನಾಡಿಗೆ ಬೀಳ್ಕೊಟ್ಟರು. ಇನ್ನು ತಮಿಳುನಾಡು ಗಡಿಯಲ್ಲಿ ಸಹಸ್ರಾರು ಕಾವೇರಿ ನದಿಪಾತ್ರದ ರೈತರು, ನಾಗರಿಕರು ಜಮಾವಣೆಗೊಂಡು ತಮ್ಮ ರಾಜ್ಯಕ್ಕೆ ರ್ಯಾಲಿಯನ್ನು ಸ್ವಾಗತಿಸಿದರು.


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments