Select Your Language

Notifications

webdunia
webdunia
webdunia
webdunia

ಕಾವೇರಿ ಬ್ಯಾಂಕ್ ಕಳ್ಳತನ ಪ್ರಕರಣ: ತನಿಖೆಗಾಗಿ 5 ತಂಡ ರಚನೆ

ಕಾವೇರಿ ಬ್ಯಾಂಕ್ ಕಳ್ಳತನ ಪ್ರಕರಣ: ತನಿಖೆಗಾಗಿ 5 ತಂಡ ರಚನೆ
ಹಾಸನ , ಮಂಗಳವಾರ, 27 ಜನವರಿ 2015 (14:01 IST)
ಜಿಲ್ಲೆಯ ಚೆನ್ನರಾಯಪಟ್ಟಣದ ಹಿರಿಸಾವೆಯಲ್ಲಿನ ಬ್ಯಾಂಕ್ ಲೂಟಿ ಪ್ರಕರಣವನ್ನು ಭೇಧಿಸುವ ಸಲುವಾಗಿ ಜಿಲ್ಲಾ ಪೊಲೀಸ್ ಇಲಾಖೆ ಸಜ್ಜಾಗಿದ್ದು, ತನಿಖೆಗಾಗಿ ಇಬ್ಬರು ಎಎಸ್‌ಪಿ ಹಾಗೂ ಐವರು ಇನ್ಸ್ಪೆಕ್ಟರ್ ಗಳಿರುವ 5 ತಂಡವನ್ನು ರಚಿಸಿದೆ. 
 
ಇಲ್ಲಿನ ಕಾವೇರಿ ಗ್ರಾಮೀಣ ಬ್ಯಾಂಕ್‌ನಲ್ಲಿ ನಿನ್ನೆ ನಡೆದಿದ್ದ ಲೂಟಿ ಪ್ರಕರಣದಲ್ಲಿ 6ಕೋಟಿ ಚಿನ್ನ ಹಾಗೂ 14 ಕೋಟಿ ನಗದು ಹಣವನ್ನು ದೋಚಿದ್ದ ಕಳ್ಳರು, ಸಿಸಿಟಿವಿ ಹಾಗೂ ಪಂಪ್ಯೂಟರ್‌ಗಳೆಲ್ಲವನ್ನೂ ಧ್ವಂಸಗೊಳಿಸಿ ಪರಾರಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿಗಳ ಪತ್ತೆಗಾಗಿ ಈ ತಂಡಗಳನ್ನು ರಚಿಸಲಾಗಿದ್ದು, ತನಿಖೆ ಕೈಗೊಂಡಿದ್ದಾರೆ. 
 
ಇನ್ನು ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸರು, ಇಂತಹ ಕೃತ್ಯಗಳು ನೆರೆಯ ಜಿಲ್ಲೆಗಳಲ್ಲಿಯೂ ನಡೆದಿದ್ದು, ಇದನ್ನೂ ಕೂಡ ಆ ಕೃತ್ಯಗಳ ತಂಡವೇ ಎಸಗಿರಬಹುದು ಎಂದಿದ್ದು, ಆರೋಪಿಗಳು ಮಂಗಳೂರು, ಶಿವಮೊಗ್ಗ ಹಾಗೂ ದಾವಣಗೆರೆ ಮೂಲದವರಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. 
 

Share this Story:

Follow Webdunia kannada