ಡಿ.ವಿ. ಸದಾನಂದ ಗೌಡರ ಪುತ್ರ ಕಾರ್ತಿಕ್ ಗೌಡರ ವಂಚನೆ ವಂಚನೆ ಪ್ರಕರಣದ ಬಗ್ಗೆ ಬಿಜೆಪಿ ಮುಖಂಡರು ಗೊಂದಲಕಾರಿ ಹೇಳಿಕೆಗಳನ್ನು ನೀಡುತ್ತಿದ್ದು, ಬಿಜೆಪಿಗೆ ಮುಜುಗರವಾಗಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ ಹೇಳಿದ್ದಾರೆ.
ಆದರೆ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಮತ್ತು ಬಿಎಸ್ವೈ ಈ ಘಟನೆಯಿಂದ ಬಿಜೆಪಿಗೆ ಮುಜುಗರವಾಗಿದೆ ಎಂದು ಹೇಳಿದ್ದು, ಇವರ ಹೇಳಿಕೆಗಳು ದ್ವಂದ್ವದಿಂದ ಕೂಡಿವೆ.
ಇದು ಡಿ.ವಿ. ಸದಾನಂದಗೌಡರ ಕುಟುಂಬದ ವಿಷಯವಾಗಿದ್ದು, ರಾಜ್ಯ ಬಿಜೆಪಿಗೆ ಯಾವುದೇ ಮುಖಭಂಗವಾಗಿಲ್ಲ ಎಂದು ಪ್ರಹ್ಲಾದ್ ಜೋಷಿ ಹೇಳಿದರು.
ಈ ಬಗ್ಗೆ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ವರದಿ ಕೇಳಿಲ್ಲ ಎಂದೂ ಅವರು ಹೇಳಿದರು. ಅಮಿತ್ ಷಾ ಅವರು ಈ ಕುರಿತು ಸದಾನಂದ ಗೌಡರನ್ನು ಪ್ರಶ್ನಿಸಿದ್ದಾರೆ ಎಂದು ವರದಿಯಾಗಿತ್ತು.