Select Your Language

Notifications

webdunia
webdunia
webdunia
webdunia

ಇಂದು ಕೂಡ ಆರ್.ಟಿ.ನಗರ ಠಾಣೆಗೆ ಹಾಜರಾದ ಕಾರ್ತಿಕ್ ಗೌಡ

ಇಂದು ಕೂಡ ಆರ್.ಟಿ.ನಗರ ಠಾಣೆಗೆ ಹಾಜರಾದ ಕಾರ್ತಿಕ್ ಗೌಡ
ಬೆಂಗಳೂರು , ಸೋಮವಾರ, 15 ಸೆಪ್ಟಂಬರ್ 2014 (11:44 IST)
ಮೈತ್ರೇಯಿ ವಿರುದ್ಧ ವಂಚನೆ ಆರೋಪ ಎದುರಿಸುತ್ತಿರುವ ಕಾರ್ತಿಕ್ ಗೌಡ ಇಂದು ಕೂಡ ಆರ್.ಟಿ.ನಗರ ಪೊಲೀಸ್ ಠಾಣೆಗೆ  ಮತ್ತೆ ಹಾಜರಾಗಿದ್ದಾರೆ. ಸೆಷನ್ಸ್ ಕೋರ್ಟ್ ಷರತ್ತಿನ ಮೇಲೆ ಅವರು ಹಾಜರಾದರು.

15 ಹಾಗೂ 30ರಂದು ಕಡ್ಡಾಯವಾಗಿ ಠಾಣೆಗೆ ಹಾಜರಾಗುವಂತೆ ಸೆಷನ್ಸ್ ಕೋರ್ಟ್ ಸೂಚಿಸಿದ್ದರಿಂದ ಪ್ರಕರಣದ ತನಿಖಾಧಿಕಾರಿ ಎದುರು ಕಾರ್ತಿಕ್ ಗೌಡ ಹಾಜರಾದರು. ಎಸಿಪಿ ಓಂಕಾರಯ್ಯ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಯುತ್ತಿದೆ.

ಈ ವೇಳೆಗೆ ಮಾತನಾಡಿದ ಕಾರ್ತಿಕ್ ವಿಚಾರಣೆ ನ್ಯಾಯಾಲಯದಲ್ಲಿದ್ದು, ತಮ್ಮ ವಿರುದ್ಧ ಸುಳ್ಳು ಕೇಸ್ ಹಾಕಲಾಗಿದೆ. ಅದರ ಬಗ್ಗೆ ನಾನು ಏನೂ ಮಾತನಾಡಲ್ಲ ಎಂದು ಕಾರ್ತಿಕ್ ಗೌಡ ಪತ್ರಕರ್ತರಿಗೆ ತಿಳಿಸಿದ್ದಾರೆ. 

Share this Story:

Follow Webdunia kannada