Webdunia - Bharat's app for daily news and videos

Install App

ಅತ್ಯಾಚಾರ ಆರೋಪಿ ರಾಘವೇಶ್ವರ್ ಭಾರತಿಯವರಿಗೆ ಪೇಜಾವರ ಶ್ರೀಗಳ ಬೆಂಬಲ

Webdunia
ಸೋಮವಾರ, 28 ಸೆಪ್ಟಂಬರ್ 2015 (19:55 IST)
ಅತ್ಯಾಚಾರ ಆರೋಪದಲ್ಲಿ ಸಿಲುಕಿರುವ ಪ್ರಭಾವಿ ರಾಘವೇಶ್ವರ್ ಭಾರತಿಯವರಿಗೆ ಮತ್ತೊಬ್ಬ ಪ್ರಭಾವಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮಿಜಿಗಳು ಬೆಂಬಲ ಸೂಚಿಸಿದ್ದಾರೆ.
 
ಐತಿಹಾಸಿಕ ಉಡುಪಿ ಶ್ರೀ ಕೃಷ್ಣ ದೇವಾಲಯದ ಸ್ವಾಮಿಜಿಗಳಾದ ವಿಶ್ವೇಶತೀರ್ಥರು, ರಾಘವೇಶ್ವರ್ ಭಾರತಿಯವರ ಅತ್ಯಾಚಾರ ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಜನತೆ ಅವರನ್ನು ಅಪರಾಧಿ ಎಂದು ಪರಿಗಣಿಸಬಾರದು. ನ್ಯಾಯಾಲಯ ತೀರ್ಪಿಗಾಗಿ ಕಾಯಬೇಕು ಎಂದು ಹೇಳಿದ್ದಾರೆ.
 
ರಾಘವೇಶ್ವರ್ ಭಾರತಿಯವರು ರಾಮಚಂದ್ರಪುರದ ಮಠದ ಸ್ಥಾನವನ್ನು ತ್ಯಜಿಸಬೇಕು ಎನ್ನುವ ಜನತೆಯ ಒತ್ತಡದ ಬಗ್ಗೆ ಉತ್ತರಿಸಿದ ಅವರು, ಅತ್ಯಾಚಾರ ಪ್ರಕರಣ ದಾಖಲಿಸಿರುವುದು ರಾಘವೇಶ್ವರ್ ಭಾರತಿಯವರ ವಿರುದ್ಧದ ಸಂಚಾಗಿರಬಹುದು. ಅಥವಾ ಅವರನ್ನು ಮಠದಿಂದ ಹೊರಗಟ್ಟಲು ಮಾಡಿರುವ ಷಡ್ಯಂತ್ರವಾಗಿರಬಹುದು ಎಂದು ಅಭಿಪ್ರಾಯಪಟ್ಟರು. 
 
ರಾಜ್ಯದ ಸಿಐಡಿ ಅಧಿಕಾರಿಗಳು ಪ್ರೇಮಲತಾ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಆರೋಪ ಪಟ್ಟಿ ದಾಖಲಿಸಿದ್ದಾರೆ. ರಾಘವೇಶ್ವರ್ ಭಾರತಿ ವಿರುದ್ಧ ಮತ್ತೊಬ್ಬ ಯುವತಿಯ ಮೇಲೆ ಅತ್ಯಾಚಾರವೆಸಗಿದ ಪ್ರಕರಣ ಕೂಡಾ ದಾಖಲಾಗಿದೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments