Select Your Language

Notifications

webdunia
webdunia
webdunia
webdunia

ಅತ್ಯಾಚಾರ ಆರೋಪಿ ರಾಘವೇಶ್ವರ್ ಭಾರತಿಯವರಿಗೆ ಪೇಜಾವರ ಶ್ರೀಗಳ ಬೆಂಬಲ

ಅತ್ಯಾಚಾರ ಆರೋಪಿ ರಾಘವೇಶ್ವರ್ ಭಾರತಿಯವರಿಗೆ ಪೇಜಾವರ ಶ್ರೀಗಳ ಬೆಂಬಲ
ಉಡುಪಿ , ಸೋಮವಾರ, 28 ಸೆಪ್ಟಂಬರ್ 2015 (19:55 IST)
ಅತ್ಯಾಚಾರ ಆರೋಪದಲ್ಲಿ ಸಿಲುಕಿರುವ ಪ್ರಭಾವಿ ರಾಘವೇಶ್ವರ್ ಭಾರತಿಯವರಿಗೆ ಮತ್ತೊಬ್ಬ ಪ್ರಭಾವಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮಿಜಿಗಳು ಬೆಂಬಲ ಸೂಚಿಸಿದ್ದಾರೆ.
 
ಐತಿಹಾಸಿಕ ಉಡುಪಿ ಶ್ರೀ ಕೃಷ್ಣ ದೇವಾಲಯದ ಸ್ವಾಮಿಜಿಗಳಾದ ವಿಶ್ವೇಶತೀರ್ಥರು, ರಾಘವೇಶ್ವರ್ ಭಾರತಿಯವರ ಅತ್ಯಾಚಾರ ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಜನತೆ ಅವರನ್ನು ಅಪರಾಧಿ ಎಂದು ಪರಿಗಣಿಸಬಾರದು. ನ್ಯಾಯಾಲಯ ತೀರ್ಪಿಗಾಗಿ ಕಾಯಬೇಕು ಎಂದು ಹೇಳಿದ್ದಾರೆ.
 
ರಾಘವೇಶ್ವರ್ ಭಾರತಿಯವರು ರಾಮಚಂದ್ರಪುರದ ಮಠದ ಸ್ಥಾನವನ್ನು ತ್ಯಜಿಸಬೇಕು ಎನ್ನುವ ಜನತೆಯ ಒತ್ತಡದ ಬಗ್ಗೆ ಉತ್ತರಿಸಿದ ಅವರು, ಅತ್ಯಾಚಾರ ಪ್ರಕರಣ ದಾಖಲಿಸಿರುವುದು ರಾಘವೇಶ್ವರ್ ಭಾರತಿಯವರ ವಿರುದ್ಧದ ಸಂಚಾಗಿರಬಹುದು. ಅಥವಾ ಅವರನ್ನು ಮಠದಿಂದ ಹೊರಗಟ್ಟಲು ಮಾಡಿರುವ ಷಡ್ಯಂತ್ರವಾಗಿರಬಹುದು ಎಂದು ಅಭಿಪ್ರಾಯಪಟ್ಟರು. 
 
ರಾಜ್ಯದ ಸಿಐಡಿ ಅಧಿಕಾರಿಗಳು ಪ್ರೇಮಲತಾ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಆರೋಪ ಪಟ್ಟಿ ದಾಖಲಿಸಿದ್ದಾರೆ. ರಾಘವೇಶ್ವರ್ ಭಾರತಿ ವಿರುದ್ಧ ಮತ್ತೊಬ್ಬ ಯುವತಿಯ ಮೇಲೆ ಅತ್ಯಾಚಾರವೆಸಗಿದ ಪ್ರಕರಣ ಕೂಡಾ ದಾಖಲಾಗಿದೆ. 

Share this Story:

Follow Webdunia kannada