Webdunia - Bharat's app for daily news and videos

Install App

Karnataka Rains: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯವರಿಗೆ ವಿಶೇಷ ಹವಾಮಾನ ಎಚ್ಚರಿಕೆ

Krishnaveni K
ಸೋಮವಾರ, 2 ಜೂನ್ 2025 (08:23 IST)
ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಜನರು ಕಳೆದ ವಾರವಿಡೀ ಮುಂಗಾರು ಮಳೆಯ ಅಬ್ಬರ ನೋಡಿದ್ದಾರೆ. ಇದು ಇಷ್ಟಕ್ಕೇ ನಿಂತಿಲ್ಲ. ಈ ವಾರ ಈ ಎರಡು ಜಿಲ್ಲೆಯವರಿಗೆ ಹವಾಮಾನ ಎಚ್ಚರಿಕೆ ಗಮನಿಸಿ.

ಕಳೆದ ವಾರ ಎಡೆಬಿಡದೇ ಸುರಿದ ಮಳೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿಯಾಗಿತ್ತು. ಹಲವು ಕಡೆ ಮನೆ, ರಸ್ತೆ ಕುಸಿದು ಸಾಕಷ್ಟು ಅನಾಹುತಗಳಾಗಿವೆ. ಹೀಗಾಗಿ ಮಳೆಯೆಂದರೆ ಭಯ ಹುಟ್ಟಿಸುವಂತಹ ಪರಿಸ್ಥಿತಿಯಾಗಿತ್ತು.

ಆದರೆ ಇದು ಇಷ್ಟಕ್ಕೇ ನಿಂತಿಲ್ಲ. ಈ ವಾರವೂ ಈ ಎರಡು ಜಿಲ್ಲೆಗಳಲ್ಲಿ ವಿಪರೀತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ವರದಿಗಳು ಹೇಳುತ್ತಿವೆ. ದಕ್ಷಿಣ ಕನ್ನಡದಲ್ಲಿ ಇಂದಿನಿಂದ ತೊಡಗಿ ಒಂದು ವಾರದವರೆಗೆ ಗುಡುಗು, ಗಾಳಿ ಸಹಿತ ಭಾರೀ ಮಳೆಯಾಗಲಿದೆ ಎಂದು ಸೂಚನೆ ನೀಡಲಾಗಿದೆ.

ಇನ್ನು, ಉಡುಪಿ ಜಿಲ್ಲೆಯ ಪರಿಸ್ಥಿತಿಯೂ ಇದೇ ಆಗಿದೆ. ಈ ಜಿಲ್ಲೆಯಲ್ಲೂ ಈ ವಾರದ ಮೊದಲಾರ್ಧದಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಲಿದೆ. ಆದರೆ ವಾರಂತ್ಯಕ್ಕೆ ಈ ಜಿಲ್ಲೆಯಲ್ಲಿ ವರುಣ ಕೊಂಚ ಬಿಡುವು ನೀಡಲಿದ್ದಾನೆ ಎಂದು ವರದಿಯಾಗಿದೆ. ಹಾಗಿದ್ದರೂ ಈ ಎರಡು ಜಿಲ್ಲೆಗಳ ಜನತೆ ಈ ವಾರವೂ ಅತೀವ ಎಚ್ಚರಿಕೆ ವಹಿಸುವುದು ಉತ್ತಮ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

Gold Price: ಗುಡ್ ನ್ಯೂಸ್, ಚಿನ್ನದ ಬೆಲೆಯಲ್ಲಿ ಇಳಿಕೆ

ಮಹಿಳೆಯರು ಬೋರಲು ಮಲಗಬಾರದೇ ಡಾ ಪದ್ಮಿನಿ ಪ್ರಸಾದ್ ಹೀಗೆ ಹೇಳಿದ್ದರು

ಧರ್ಮಸ್ಥಳ ಕೇಸ್: ಕೊನೆಗೂ ಆ ಮಹತ್ವದ ತನಿಖೆಗೆ ಸಮಯ ಬಂದೇ ಬಿಡ್ತು

ಕೆಎನ್ ರಾಜಣ್ಣ ವಜಾ ಇಫೆಕ್ಟ್: ರಾಹುಲ್ ಗಾಂಧಿ ಕೆಲಸದಿಂದ ಇವರಿಗೆಲ್ಲಾ ನಡುಕ ಶುರು

ಮುಂದಿನ ಸುದ್ದಿ
Show comments