ಕಲಾಪದಲ್ಲಿ ಜವಾಬ್ದಾರಿ ಮರೆತ ಶಾಸಕರು!

Webdunia
ಬುಧವಾರ, 7 ಜೂನ್ 2017 (11:30 IST)
ಬೆಂಗಳೂರು: ವಿಧಾನಸೌಧದಲ್ಲಿ ಮುಂಗಾರು ಅಧಿವೇಶನ ಆರಂಭವಾಗಿ ಎರಡು ದಿನ ಕಳೆದಿದೆ. ಆದರೆ ಯಾಕೋ ಶಾಸಕರು, ಸಚಿವರಿಗೆ ಅಧಿವೇಶನಕ್ಕೆ ಬರಲು ಮನಸ್ಸೇ ಆಗುತ್ತಿಲ್ಲ.

 
ಇಂದು ಕಲಾಪದಲ್ಲಿ ಹಾಜರಿದ್ದ ಶಾಸಕರು ಕೇವಲ 40 ಮಂದಿ ಮಾತ್ರ. ಇನ್ನು ಸಚಿವರುಗಳ ಪೈಕಿ ಕೇವಲ 6 ಮಂದಿ ಸಚಿವರು ಸದನದಲ್ಲಿದ್ದಾರೆ. ಉಳಿದಂತೆ ಎಲ್ಲರೂ ಗೈರಾಗಿದ್ದಾರೆ. ವಿಶೇಷವೆಂದರೆ ಗೈರಾದವರಲ್ಲಿ ಪಕ್ಷ ಬೇಧವಿಲ್ಲ.

ಬರ ಚರ್ಚೆ ಹಾಗೂ ವಿವಿಧ ಇಲಾಖಾವಾರು ಚರ್ಚೆಗಳು ನಡೆಯುತ್ತಿರುವಾಗ ಜನ ಪ್ರತಿನಿಧಿಗಳೇ ಇಲ್ಲದಿದ್ದರೆ, ಜನರ ಸಮಸ್ಯೆಗಳಿಗೆ ಪರಿಹಾರ ಸಿಗುವುದು ಹೇಗೆ ಎಂಬುದೇ ಎಲ್ಲರ ಪ್ರಶ್ನೆ. ಆದರೆ ಜನರಿಂದ ಚುನಾಯಿತರಾಗಿ ಜನರ ಆಶೋತ್ತರಗಳಿಗೆ ಧ್ವನಿಯಾಗಬೇಕಾದ ಶಾಸಕರು ತಮ್ಮದೇ ಲೋಕದಲ್ಲಿದ್ದಾರೆ ಎನ್ನುವುದೇ ಬೇಸರದ ಸಂಗತಿ.

http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಶ್ರೀಕೃಷ್ಣನಂತೆ ಯಾವುದೇ ಮಗು ಜೈಲಿನಲ್ಲಿ ಜನಿಸಿದ ಕಳಂಕವನ್ನು ಎದುರಿಸಬಾರದು: ನಿದಾ ಖಾನ್‌ಗೆ ಜಾಮೀನು

ಕೋಝಿಕ್ಕೋಡ್ ರೈಲ್ವೆ ನಿಲ್ದಾಣದ ಗಡಿಯಾರ ಗೋಪುರ ಕುಸಿತ, ತಪ್ಪಿದ ಭಾರೀ ದುರಂತ

ಜಿಬಿಎ ಚುನಾವಣೆ ಇನ್ನೂ ಮುಂದೂಡಬೇಡಿ: ಎಸ್.ಆರ್.ವಿಶ್ವನಾಥ್

ರೈಲು ಬರುವ ವೇಳೆಗೆ ಟ್ರ್ಯಾಕ್ ನಲ್ಲೇ ನಿಂತಿದ್ದ ವ್ಯಕ್ತಿ: ಹೀರೋನಂತೆ ಬಂದ ಗಾರ್ಡ್ ಮಾಡಿದ್ದೇನು ನೋಡಿ Video

ಸರ್ಕಾರವನ್ನು ಜನರು ಹುಡುಕಬಾರದು, ಜನರ ಬಳಿಯೇ ಸರ್ಕಾರ ಹೋಗಬೇಕು

ಮುಂದಿನ ಸುದ್ದಿ
Show comments