Webdunia - Bharat's app for daily news and videos

Install App

ಬಿಎಸ್‌ವೈ ತಂಗಿ, ಕುಟುಂಬಸ್ಥರನ್ನು ನಿಂದಿಸಿದ ಕಾ.ಪು.ಸಿದ್ದಲಿಂಗಸ್ವಾಮಿ

Webdunia
ಶುಕ್ರವಾರ, 5 ಮೇ 2017 (11:27 IST)
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ತಂಗಿ, ಕುಟುಂಬಸ್ಥರನ್ನು ಅವರ ಆಪ್ತ ಕಾ.ಪು.ಸಿದ್ದಲಿಂಗಸ್ವಾಮಿ ನಿಂದಿಸಿದ ಆಡಿಯೋ ನಗರಾದ್ಯಂತ ಹರಿದಾಡುತ್ತಿದೆ.
 
ಯಡಿಯೂರಪ್ಪ ಅವರ ತಂಗಿಯ ಮಗ ರಾಜೇಶ್‌ನಿಗೆ ಮೊಬೈಲ್ ಫೋನ್ ಮೂಲಕ ಅವಾಚ್ಯ ಶಬ್ದಗಳಿಂದ ನಿಂದಿಸಿ, ನೀನು ದುರಹಂಕಾರಿ, ನಗರಸಭೆ ಚುನಾವಣೆಯಲ್ಲೂ ಕೂಡಾ ಗೆಲ್ಲದ ನಿನಗೆ ಯಡಿಯೂರಪ್ಪ ಹೆಸರು ಹೇಳಿಕೊಂಡು ಯಾಕೆ ಬದುಕುತ್ತೀಯಾ ಎಂದು ಸಿದ್ದಲಿಂಗ ಸ್ವಾಮಿ ಟೀಕಿಸಿರುವುದು ವಾಟ್ಸಪ್‌ಗಳಲ್ಲಿ ಹರಿದಾಡುತ್ತಿದೆ.
 
ಸಿದ್ದಲಿಂಗಯ್ಯ ಸ್ವಾಮಿಗೆ ಪ್ರತಿಕ್ರಿಯೆ ನೀಡಿರುವ ರಾಜೇಶ್, ನೀವು ನಮ್ಮ ಮನೆಯಲ್ಲಿ ಬೆಳೆದು, ಶ್ರೀಮಂತರಾಗಿ ಇದೀಗ ನಮ್ಮ ಕುಟುಂಬದವರ ವಿರುದ್ಧವೇ ಹೇಳಿಕೆ ನೀಡುತ್ತಿದ್ದೀರಿ. ನಿಮ್ಮ ಸಾವು ಕೊನೆಗೆ ಬಂದಿದೆ. ಅಪಘಾತದಲ್ಲಿ ಸಾವನ್ನಪ್ಪುತ್ತೀಯಾ ಎಂದು ಎಚ್ಚರಿಕೆ ನೀಡಿದ ಆಡಿಯೋ ಕೂಡಾ ಬಹಿರಂಗವಾಗಿದೆ.
 
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನಮಗೆ ದೇವರ ಸಮಾನ. ಅವರ ಹೆಸರು ಹೇಳಿ ಬದುಕುವುದಕ್ಕಿಂತ ನಿಮ್ಮ ಸಾಧನೆ ಏನು ಎನ್ನುವುದನ್ನು ತೋರಿಸಿ? ಅವರ ಹೆಸರಿನ ಮೇಲೆ ಜೀವನ ಮಾಡುವುದು ಬಿಡಿ ಎಂದು ಕಾ.ಪು.ಸಿದ್ದಲಿಂಗ ಸ್ವಾಮಿ ತಿರುಗೇಟು ನೀಡಿರುವುದು ಬಿಜೆಪಿ ವಲಯದಲ್ಲಿ ಕೋಲಾಹಲ ಸೃಷ್ಟಿಸಿದೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಾನು ದೇಶಭಕ್ತ ಅದಕ್ಕೇ ಸೂಸೈಡ್ ಬಾಂಬ್ ಕಟ್ಟಿಕೊಂಡು ಯುದ್ಧಕ್ಕೆ ಹೋಗ್ತೀನಿ ಎಂದೆ: ಜಮೀರ್ ಅಹ್ಮದ್

ಮಗಳ ನಿಶ್ಚಿತಾರ್ಥ ಮುಗಿಸಿ ಮನೆಗೆ ವಾಪಾಸ್ಸಾಗುತ್ತಿದ್ದ ವೇಳೆ ಅಪಘಾತ: ವಧು ಸೇರಿದಂತೆ ಐವರು ಸಾವು

ಪ್ರಧಾನಿ ಮೋದಿ ಜಮ್ಮು ಕಾಶ್ಮೀರ ಭೇಟಿ ರದ್ದಿಗೆ ಇದೇ ಕಾರಣ: ಮಲ್ಲಿಕಾರ್ಜುನ ಖರ್ಗೆ

ಗುಜರಾತ್‌: ರಾಜ್ಯದಲ್ಲಿ ಸುರಿದ ಭಾರೀ ಮಳೆಗೆ 14ಸಾವು, ಭಾರೀ ಹಾನಿ

Viral video: ಚಪಲ ಚೆನ್ನಿಗರಾಯ ವೃದ್ಧ.. ಬಿಎಂಟಿಸಿ ಬಸ್ ನಲ್ಲಿ ಮಹಿಳೆಗೆ ಮಾಡಿದ್ದೇನು

ಮುಂದಿನ ಸುದ್ದಿ
Show comments