Webdunia - Bharat's app for daily news and videos

Install App

ಬಿಎಸ್‌ವೈ ತಂಗಿ, ಕುಟುಂಬಸ್ಥರನ್ನು ನಿಂದಿಸಿದ ಕಾ.ಪು.ಸಿದ್ದಲಿಂಗಸ್ವಾಮಿ

Webdunia
ಶುಕ್ರವಾರ, 5 ಮೇ 2017 (11:27 IST)
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ತಂಗಿ, ಕುಟುಂಬಸ್ಥರನ್ನು ಅವರ ಆಪ್ತ ಕಾ.ಪು.ಸಿದ್ದಲಿಂಗಸ್ವಾಮಿ ನಿಂದಿಸಿದ ಆಡಿಯೋ ನಗರಾದ್ಯಂತ ಹರಿದಾಡುತ್ತಿದೆ.
 
ಯಡಿಯೂರಪ್ಪ ಅವರ ತಂಗಿಯ ಮಗ ರಾಜೇಶ್‌ನಿಗೆ ಮೊಬೈಲ್ ಫೋನ್ ಮೂಲಕ ಅವಾಚ್ಯ ಶಬ್ದಗಳಿಂದ ನಿಂದಿಸಿ, ನೀನು ದುರಹಂಕಾರಿ, ನಗರಸಭೆ ಚುನಾವಣೆಯಲ್ಲೂ ಕೂಡಾ ಗೆಲ್ಲದ ನಿನಗೆ ಯಡಿಯೂರಪ್ಪ ಹೆಸರು ಹೇಳಿಕೊಂಡು ಯಾಕೆ ಬದುಕುತ್ತೀಯಾ ಎಂದು ಸಿದ್ದಲಿಂಗ ಸ್ವಾಮಿ ಟೀಕಿಸಿರುವುದು ವಾಟ್ಸಪ್‌ಗಳಲ್ಲಿ ಹರಿದಾಡುತ್ತಿದೆ.
 
ಸಿದ್ದಲಿಂಗಯ್ಯ ಸ್ವಾಮಿಗೆ ಪ್ರತಿಕ್ರಿಯೆ ನೀಡಿರುವ ರಾಜೇಶ್, ನೀವು ನಮ್ಮ ಮನೆಯಲ್ಲಿ ಬೆಳೆದು, ಶ್ರೀಮಂತರಾಗಿ ಇದೀಗ ನಮ್ಮ ಕುಟುಂಬದವರ ವಿರುದ್ಧವೇ ಹೇಳಿಕೆ ನೀಡುತ್ತಿದ್ದೀರಿ. ನಿಮ್ಮ ಸಾವು ಕೊನೆಗೆ ಬಂದಿದೆ. ಅಪಘಾತದಲ್ಲಿ ಸಾವನ್ನಪ್ಪುತ್ತೀಯಾ ಎಂದು ಎಚ್ಚರಿಕೆ ನೀಡಿದ ಆಡಿಯೋ ಕೂಡಾ ಬಹಿರಂಗವಾಗಿದೆ.
 
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನಮಗೆ ದೇವರ ಸಮಾನ. ಅವರ ಹೆಸರು ಹೇಳಿ ಬದುಕುವುದಕ್ಕಿಂತ ನಿಮ್ಮ ಸಾಧನೆ ಏನು ಎನ್ನುವುದನ್ನು ತೋರಿಸಿ? ಅವರ ಹೆಸರಿನ ಮೇಲೆ ಜೀವನ ಮಾಡುವುದು ಬಿಡಿ ಎಂದು ಕಾ.ಪು.ಸಿದ್ದಲಿಂಗ ಸ್ವಾಮಿ ತಿರುಗೇಟು ನೀಡಿರುವುದು ಬಿಜೆಪಿ ವಲಯದಲ್ಲಿ ಕೋಲಾಹಲ ಸೃಷ್ಟಿಸಿದೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments