ಫೋನ್ ಪೇ ಬಹಿಷ್ಕರಿಸಲು ಶುರು ಮಾಡಿದ ಕನ್ನಡಿಗರು: ಕಾರಣ ಇಷ್ಟೇ

Krishnaveni K
ಶನಿವಾರ, 20 ಜುಲೈ 2024 (09:05 IST)
ಬೆಂಗಳೂರು: ಕಳೆದ ಎರಡು ದಿನಗಳಿಂದ ಕನ್ನಡಿಗರು ಹಣ ಟ್ರಾನ್ಸ್ ಫರ್ ಮಾಡುವ ಜನಪ್ರಿಯ ಫೋನ್ ಪೇ ಆಪ್ ನ್ನು ಬಹಿಷ್ಕರಿಸಲು ಶುರು ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಇಂತಹದ್ದೊಂದು ಟ್ರೆಂಡ್ ಶುರುವಾಗಿದೆ.

ಇದಕ್ಕೆ ಕಾರಣ ಇತ್ತೀಚೆಗೆ ಫೋನ್ ಪೇ ಸಂಸ್ಥಾಪಕ ನೀಡಿದ ಒಂದು ಹೇಳಿಕೆ. ಅಷ್ಟಕ್ಕೂ ಆಗಿದ್ದೇನು ಇಲ್ಲಿ ನೋಡಿ. ಇತ್ತೀಚೆಗೆ ರಾಜ್ಯ ಸರ್ಕಾರ ಕರ್ನಾಟಕದಲ್ಲಿ ಖಾಸಗಿ ವಲಯದಲ್ಲಿ ಕನ್ನಡಿಗೆ ಉದ್ಯೋಗ ಮೀಸಲಾಯಿ ಮಸೂದೆ ಪಾಸ್ ಮಾಡಿತ್ತು. ಇದರ ವಿರುದ್ಧ ಫೋನ್ ಪೇ ಸಂಸ್ಥಾಪಕ ಸಮೀರ್ ನಿಗಮ್ ಟ್ವೀಟ್ ಮಾಡಿದ್ದರು.

ಇಂತಹದ್ದೊಂದು ಮೀಸಲಾತಿ ತಂದರೆ ನನ್ನ ಮಕ್ಕಳಿಗೆ ಕರ್ನಾಟಕದಲ್ಲಿ ಕೆಲಸ ಮಾಡುವ ಯೋಗ್ಯತೆಯೇ ಇರಲ್ವಾ. ಇಂತಹದ್ದೊಂದು ಮೀಸಲಾತಿ ನಿಯಮ ಜಾರಿಗೆ ತಂದ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದು ಸಮೀರ್ ಟೀಕಾ ಪ್ರಹಾರ ನಡೆಸಿದ್ದರು. ಇದು ಕನ್ನಡಿಗರನ್ನು ಕೆರಳಿಸಿದೆ.

ಇದೇ ಕಾರಣಕ್ಕೆ ಕೆಲವರು ಫೋನ್ ಪೇ ಆಪ್ ನ್ನು ತಮ್ಮ ಫೋನ್ ನಿಂದ ಅನ್ ಇನ್ ಸ್ಟಾಲ್ ಮಾಡುವ ಮೂಲಕ ಬಹಿಷ್ಕಾರದ ಅಭಿಯಾನಕ್ಕೆ ಕೈಜೋಡಿಸುತ್ತಿದ್ದಾರೆ. ಕನ್ನಡಿಗರ ಮೀಸಲಾತಿಯನ್ನು ವಿರೋಧಿಸಿದ ನಿಮ್ಮ ಆಪ್ ಕೂಡಾ ನಮ್ಮ ಫೋನ್ ನಲ್ಲಿ ಬೇಡ ಎಂದು ಕೆಲವರು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಸಮೇತ ಬಹಿಷ್ಕಾರ ಮಾಡುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸರ್ಕಾರದ ಸುಳ್ಳಿನ ಕಂತೆಗೆ ರಾಜ್ಯಪಾಲರು ಧ್ವನಿಯಾಗಬೇಕು ಎಂಬ ನಿಯಮ ಸಂವಿಧಾನದಲ್ಲಿ ಇಲ್ಲ: ಆರ್. ಅಶೋಕ್

ಸಂಪೂರ್ಣ ವಿದ್ಯುತ್ ಚಾಲಿತ ಇಂಟರ್ ಸಿಟಿ ಬಸ್ ಗೆ ಫ್ರೆಶ್ ಬಸ್ ಒಡಂಬಡಿಕೆ

ಅಧಿವೇಶನದಲ್ಲಿ ರಾಜ್ಯಪಾಲರನ್ನು ಭಾಷಣ ಮಾಡಿಸುವ ಕಾಂಗ್ರೆಸ್ ಉದ್ದೇಶ ಇದೇ ಆಗಿತ್ತು: ಬಿವೈ ವಿಜಯೇಂದ್ರ

ಕೇರಳ ದೀಪಕ್ ಆತ್ಮಹತ್ಯೆ ಪ್ರಕರಣ, ಆರೋಪಿ ಶಮ್ಜಿತಾ ಮುಸ್ತಫಾಗೆ ಬಿಗ್‌ ಶಾಕ್

ಕೇಂದ್ರದ ಯೋಜನೆಗೆ ಕಾಂಗ್ರೆಸ್ ಸರ್ಕಾರದಿಂದ ಅಡ್ಡಗಾಲು: ಆರ್‌ ಅಶೋಕ್

ಮುಂದಿನ ಸುದ್ದಿ
Show comments