Select Your Language

Notifications

webdunia
webdunia
webdunia
webdunia

ಖ್ಯಾತ ನಿರ್ದೇಶಕ ಎಸ್.ನಾರಾಯಣ್ ಕಾರಿನಲ್ಲಿದ್ದ 3.5 ಲಕ್ಷ ರೂ.ಕಳ್ಳತನ

ಖ್ಯಾತ ನಿರ್ದೇಶಕ ಎಸ್.ನಾರಾಯಣ್ ಕಾರಿನಲ್ಲಿದ್ದ 3.5 ಲಕ್ಷ ರೂ.ಕಳ್ಳತನ
ಬೆಂಗಳೂರು , ಶುಕ್ರವಾರ, 31 ಜುಲೈ 2015 (15:19 IST)
ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಎಸ್.ನಾರಾಯಣ್ ತಮ್ಮ ಕಾರನ್ನು ವಿಜಯ್‌ನಗರದ ಫೆಡರಲ್ ಬ್ಯಾಂಕ್ ಬಳಿ ಪಾರ್ಕ್ ಮಾಡಿದ್ದಾಗ ಕಾರಿನ ಗ್ಲಾಸ್ ಒಡೆದು ಆರೋಪಿಗಳು 3.5 ಲಕ್ಷ ರೂ ನಗದು ಮತ್ತು ಚೆಕ್‌ಬುಕ್‌ಗಳನ್ನು ಲಪಟಾಯಿಸಿಕೊಂಡು ಪರಾರಿಯಾಗಿದ್ದಾರೆ. 
 
3.5 ಲಕ್ಷ ರೂ. ನಗದು ಮತ್ತು ಚೆಕ್‌ಗಳಿರುವ ಸೂಟ್‌ಕೇಸ್‌ನ್ನು ಕಾರಿನ ಮುಂಭಾಗದ ಸೀಟ್‌ನಲ್ಲಿಟ್ಟು ಚಿತ್ರನಿರ್ದೇಶಕ ಎಸ್.ನಾರಾಯಣ್ ಇಂದು ಬೆಳಿಗ್ಗೆ 11.30 ಗಂಟೆಗೆ ಫೆಡರಲ್ ಬ್ಯಾಂಕ್‌ನೊಳಗೆ ಹೋಗಿದ್ದರು. ಅವರ ಕಾರಿನ ಚಾಲಕ ರವಿಶಂಕರ್ ಹತ್ತಿರದಲ್ಲಿರುವ ಶಾಪ್‌‌ಗೆ ತೆರಳಿದ್ದ. ಆದರೆ ಕಾರಿನ ಅಲರಾಂ ಕೇಳಿದ ಚಾಲಕ ಓಡೋಡಿ ಕಾರು ನಿಲ್ಲಿಸದ ಸ್ಥಳಕ್ಕೆ ಬಂದು ನೋಡಿದಾಗ ಕಾರಿನಲ್ಲಿದದ್ ಸೂಟ್‌ಕೇಸ್ ಮಾಯವಾಗಿತ್ತು.  
 
ನಾರಾಯಣ್ ವಿಜಯನಗರ ಪೊಲೀಸ್ ಠಾಣೆಯಲ್ಲಿ ಕಳ್ಳತನದ ದೂರು ದಾಖಲಿಸಿದ್ದು, ಪೊಲೀಸರು ಬ್ಯಾಂಕ್‌ನ ಮುಂಭಾಗದಲ್ಲಿರುವ ಸಿಸಿಟಿವಿ ವಿಡಿಯೋಗಳನ್ನು ಪರಿಶೀಲಿಸುತ್ತಿದ್ದಾರೆ. ನಾರಾಯಣ್ ಅವರ ಚಾಲಕನನ್ನು ಕೂಡಾ ಪೊಲೀಸರು ವಿಚಾರಣೆ ನಡೆಸಿದ್ದಾರೆ.
 
ಸಿಸಿಟಿವಿ ವಿಡಿಯೋಗಳ ಮೂಲಕ ಕಳ್ಳತನವೆಸಗಿದ ಆರೋಪಿಗಳನ್ನು ಪತ್ತೆ ಹಚ್ಚಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಶೀಘ್ರದಲ್ಲಿ ಆರೋಪಿಗಳನ್ನು ಬಂಧಿಸುವ ವಿಶ್ವಾಸವಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 

Share this Story:

Follow Webdunia kannada