Select Your Language

Notifications

webdunia
webdunia
webdunia
webdunia

ಕೆ.ಎಸ್.ಈಶ್ವರಪ್ಪ ಹುಚ್ಚು ನಾಯಿ ಇದ್ದಂತೆ: ಮಹಾದೇವಪ್ಪ

ಕೆ.ಎಸ್.ಈಶ್ವರಪ್ಪ ಹುಚ್ಚು ನಾಯಿ ಇದ್ದಂತೆ: ಮಹಾದೇವಪ್ಪ
ಮೈಸೂರು , ಗುರುವಾರ, 30 ಜೂನ್ 2016 (17:09 IST)
ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಹುಚ್ಚು ನಾಯಿ ಇದ್ದಂತೆ ಎಂದು ಸಚಿವ ಡಾ. ಎಚ್.ಸಿ.ಮಹಾದೇವ ಪ್ರಸಾದ್ ಗುಡುಗಿದ್ದಾರೆ.
 
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾನವೇ ಇಲ್ಲದವರ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಿ ಏನು ಪ್ರಯೋಜನ. ಅದೊಂದು ಹುಚ್ಚು ನಾಯಿ ಎಂದು ವಾಗ್ದಾಳಿ ನಡೆಸಿದ್ದಾರೆ.
 
ನಾನಾಗಲಿ ಅಥವಾ ನನ್ನ ಪುತ್ರನಾಗಲಿ ಒಂದು ಬಾಂಡ್ಲಿ ಅಕ್ರಮ ಮರಳು ಸಾಗಾಣಿಕೆ ನಡೆಸಿದ್ದರೆ ಸಾಕ್ಷಿ ಕೊಡಿ. ಸಾಕ್ಷಿ ಕೊಟ್ಟ ಕೂಡಲೇ  ನನ್ನ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಸವಾಲ್ ಹಾಕಿದರು.
 
 ಲೋಕಾಯುಕ್ತ ನನ್ನ ಪರವಾಗಿ ವರದಿ ನೀಡಿದೆ. ಆದಾಗ್ಯೂ, ಈಶ್ವರಪ್ಪಗೆ ಮಾತನಾಡುವ ಚಟ. ಆದ್ದರಿಂದಲೇ ಯಾವುದೇ ದಾಖಲೆಗಳಿರದಿದ್ದರೂ ಬಾಯಿಗೆ ಬಂದಂತೆ ಹೇಳಿಕೆ ನೀಡುತ್ತಾರೆ ಎಂದು ಸಚಿವ ಮಹಾದೇವ್ ಪ್ರಸಾದ್ ತಿರುಗೇಟು ನೀಡಿದರು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಸಂಸದೆ ಶೋಭಾ ಕರಂದ್ಲಾಜೆಗೆ ಕೇಂದ್ರ ಸಚಿವ ಪಟ್ಟ?