Select Your Language

Notifications

webdunia
webdunia
webdunia
webdunia

ಮೂವರು ಇಂಜಿನಿಯರ್‌ಗಳನ್ನು ರಕ್ಷಿಸಿದ ದಿನಗೂಲಿ ನೌಕರರು

ಮೂವರು ಇಂಜಿನಿಯರ್‌ಗಳನ್ನು ರಕ್ಷಿಸಿದ ದಿನಗೂಲಿ ನೌಕರರು
ಜೋಗ , ಗುರುವಾರ, 18 ಫೆಬ್ರವರಿ 2016 (21:13 IST)
ಜೋಗದ ಶರಾವತಿ ಜಲವಿದ್ಯುತ್‌ಗಾರದಲ್ಲಿ ಅಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು, ಮೂರನೇ ಅಂತಸ್ಥಿನಲ್ಲಿದ್ದ ಮೂವರು ಇಂಜಿನಿಯರ್‌ಗಳನ್ನು ದಿನಗೂಲಿ ನೌಕರರು ಜೀವದ ಹಂಗು ತೊರೆದು ರಕ್ಷಿಸಿದ ಘಟನೆ ವರದಿಯಾಗಿದೆ.
 
ಅಕಸ್ಮಿಕ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಸಿಬ್ಬಂದಿ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದಾಗ ಕೂಡಲೇ ಸ್ಥಳಕ್ಕೆ ಧಾವಿಸಿದ ನಾಲ್ಕು ಅಗ್ನಿಶಾಮಕ ಸಿಬ್ಬಂದಿ ದಳ ಮೊದಲ ಮತ್ತು ಎರಡನೇ ಮಹಡಿಯಲ್ಲಿ ಆವರಿಸಿಕೊಂಡಿದ್ದು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
 
ಕಂಟ್ರೋಲ್ ರೂಮ್‌ನಲ್ಲಿದ್ದ ಉಪಕರಣಗಳು ಬೆಂಕಿಗೆ ಆಹುತಿಯಾಗಿವೆ. ಸ್ಥಳದಲ್ಲಿ ಉಪಸ್ಥಿತರಿರುವ ಕೆಪಿಸಿಎಲ್ ಅಧಿಕಾರಿಗಳು  
 
ಮೂರನೇ ಮಹಡಿಯಲ್ಲಿದ್ದ ಇಂಜಿನಿಯರ್‌ಗಳಾದ ನಾಗರಾಜ್ ಭಟ್,ಬಾಲಚಂದ್ರ, ಜಾಯ್ಲಿನ್ ಅವರನ್ನು ರಕ್ಷಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಕೆಲ ಮಟ್ಟಿಗೆ ಗಾಯಗಳಾಗಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Share this Story:

Follow Webdunia kannada