Webdunia - Bharat's app for daily news and videos

Install App

ಜಿಂದಾಲ್ ಪ್ರಕರಣ: ಬಿಜೆಪಿಯಿಂದ ಜೂ. 14, 15 ರಂದು ಅಹೋರಾತ್ರಿ ಧರಣಿ

Webdunia
ಬುಧವಾರ, 12 ಜೂನ್ 2019 (19:29 IST)
ಜಿಂದಾಲ್ ಗೆ‌ ಭೂಮಿ‌ ಮಾರಾಟ ನಿರ್ಧಾರದ ಮರುಪರಿಶೀಲನೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಪ್ರತಿಭಟನೆ ಹಾದಿ ತುಳಿದಿದೆ.

ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಹೇಳಿಕೆ ನೀಡಿದ್ದು, ಜಿಂದಾಲ್ ಕುರಿತ ಮುಖ್ಯಮಂತ್ರಿಗಳ ನಿರ್ಧಾರ ಸ್ವಾಗತಾರ್ಹ. ಆದರೆ ನಮ್ಮ ವಿರೋಧ ಇರೋದು ಜಿಂದಾಲ್ ಗೆ ಭೂಮಿ‌ ಮಾರಾಟವೇ ಬೇಡ ಅಂತ. ಸರ್ಕಾರ ಮಾರಾಟ ಮಾಡಲು ಮುಂದಾಗಿರುವ ಭೂಮಿಯಲ್ಲಿ ಕೋಟ್ಯಂತರ ಮೌಲ್ಯದ ಕಬ್ಬಿಣದ ಅದಿರಿನ‌ ನಿಕ್ಷೇಪ ಇದೆ. ಕಬ್ಬಿಣದ ನಿಕ್ಷೇಪ ಕುರಿತು ಸರ್ಕಾರ ತಜ್ಞರಿಂದ ಅಧ್ಯಯನ‌ ನಡೆಸಲಿ ಎಂದರು.

ನಮ್ಮ ಪ್ರತಿಭಟನೆ ಮುಂದುವರೆಯಲಿದೆ. ಸಿಎಂ ಭರವಸೆ ಕೊಟ್ಟಿರುವ 45 ಸಾವಿರ ಕೋಟಿ ರೂ ಸಾಲಮನ್ನ ಕೂಡಲೇ ಮಾಡಲಿ. ಬರ ನಿರ್ವಹಣೆ ಸಮರ್ಥವಾಗಿ‌ ನಿರ್ವಹಿಸಲಿ. ಸರ್ಕಾರದ ವೈಫಲ್ಯ ಖಂಡಿಸಿ ಬಿಜೆಪಿ ಎರಡು ದಿನ ಅಹೋರಾತ್ರಿ ಪ್ರತಿಭಟನೆ ಮಾಡಲಿದ್ದೇವೆ ಎಂದರು.

ಈ ಮೊದಲು ಮೂರು ದಿನ‌ ಪ್ರತಿಭಟನೆಗೆ ನಿರ್ಧರಿಸಿದ್ವಿ. ಆದ್ರೆ ಈಗ 14 ಮತ್ತು 15 ರಂದು ಮಾತ್ರ ಅಹೋರಾತ್ರಿ‌ ಧರಣಿ ಮಾಡ್ತಿದ್ದೇವೆ ಎಂದರು.

16 ರಂದು ಪ್ರತಿಭಟನೆ ಮಾಡಲ್ಲ. ಯಾಕಂದ್ರೆ 16 ರಂದು ನಮ್ಮ ಎಲ್ಲ ಸಂಸದರೂ ದೆಹಲಿಗೆ ಹೋಗ್ತಿದಾರೆ ಅಂತ
ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸೆ.1ರಂದು ಧರ್ಮಸ್ಥಳ ಚಲೋ, ಬೃಹತ್ ಸಮಾವೇಶ:ವಿಜಯೇಂದ್ರ

ಧರ್ಮಸ್ಥಳದ ವಿರುದ್ಧ ದೊಡ್ಡ ಷಡ್ಯಂತ್ರ: ಎಸ್.ಆರ್.ವಿಶ್ವನಾಥ್

ಟಿಪ್ಪು ಸುಲ್ತಾನ್ ದಸರಾ ಮಾಡಿದ್ರು: ತನ್ವೀರ್ ಸೇಠ್ ಹೇಳಿಕೆ

ಬಾನು ಮುಷ್ತಾಕ್ ಹಿಂದೂ ಸಂಸ್ಕೃತಿ ಒಪ್ಪಿ ಬರ್ತಾರಾ: ಬಿವೈ ವಿಜಯೇಂದ್ರ

ಧರ್ಮಸ್ಥಳ ಪ್ರಕರಣದಲ್ಲಿ ಎಸ್ಐಟಿಗೆ ಸೂಚಿಸಿದ ದೆಹಲಿ ನಾಯಕ ಯಾರು: ತೇಜಸ್ವಿ ಸೂರ್ಯ

ಮುಂದಿನ ಸುದ್ದಿ
Show comments