ಮನೆಯಲ್ಲಿದ್ದ ಚಿನ್ನಾಭರಣಗಳನ್ನು ದೋಚಿ ಪ್ರಿಯಕರನೊಂದಿಗೆ ಪತ್ನಿ ಪರಾರಿಯಾದ ಘಟನೆ ವರದಿಯಾಗಿದೆ.ಘಟನೆ ಕುರಿತಂತೆ ಹಾಸನದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾಸನ ತಾಲೂಕಿನ ಚೆನ್ನೇಹಳ್ಳಿ ನಿವಾಸಿಯಾದ ದೇವರಾಜು ಎನ್ನುವವರನ್ನು ಕೇವಲ ಮೂರು ತಿಂಗಳ ಹಿಂದೆ ವಿವಾಹವಾಗಿದ್ದ ಪುಷ್ಪಲತಾ, ಪತಿ ದೇವರಾಜು ಅತ್ತೆ ಲೀಲಾವತಿ ಮತ್ತು ಮಾವ ರಾಜಣ್ಣನಿಗೆ ಊಟದಲ್ಲಿ ನಿದ್ರೆ ಮಾತ್ರೆ ಬೆರೆಸಿ ನೀಡಿದ್ದಾಳೆ.
ನಿದ್ರೆ ಮಾತ್ರೆ ಪ್ರಭಾವದಿಂದಾಗಿ ಪತಿ ದೇವರಾಜು ಅತ್ತೆ ಲೀಲಾವತಿ ಮತ್ತು ಮಾವ ರಾಜಣ್ಣ ನಿದ್ರಾವಸ್ಥೆಯಲ್ಲಿರುವಾಗ ಪುಷ್ಪಲತಾ, ಮನೆಯಲ್ಲಿದ್ದ ಚಿನ್ನಾಭರಣ, ನಗದು ಹಣ ದೋಚಿ ತನ್ನ ಪ್ರಿಯಕರೊಂದಿಗೆ ಪರಾರಿಯಾಗಿದ್ದಾಳೆ.
ಪತಿ ದೇವರಾಜು ಪತ್ನಿ ಪುಷ್ಪಲತಾ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ದೂರು ಆಧರಿಸಿ ಪೊಲೀಸರು ಪುಷ್ಪಲತಾ ಬಂಧನಕ್ಕೆ ಜಾಲ ಬೀಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.