Webdunia - Bharat's app for daily news and videos

Install App

ಮಾತು ತಪ್ಪಿದ್ರೆ 2023ಕ್ಕೆ ಜೆಡಿಎಸ್ ವಿಸರ್ಜನೆ ಮಾಡುತ್ತೇನೆ ಎಂದ ಹೆಚ್ಡಿಕೆ

Webdunia
ಬುಧವಾರ, 6 ಏಪ್ರಿಲ್ 2022 (08:31 IST)
ಬೆಂಗಳೂರು : ಒಂದು ಬಾರಿ ಅವಕಾಶ ಕೊಡಿ. ಐದು ವರ್ಷಗಳ ಸಂಪೂರ್ಣ ಅವಧಿಗೆ ನಮ್ಮನ್ನು ಆಯ್ಕೆ ಮಾಡಿ, ನೀರಾವರಿ ಯೋಜನೆಗಳನ್ನು ಸಂಪೂರ್ಣಗೊಳಿಸುತ್ತೇನೆ.

ಒಂದು ವೇಳೆ ಮಾತು ತಪ್ಪಿದರೆ ಜನತಾದಳ ವಿಸರ್ಜನೆ ಮಾಡುತ್ತೇನೆ ಅಂತಾ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಆಯೋಜಿಸಿದ್ದ ರೈತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೀರಾವರಿ ಯೋಜನೆಗಳನ್ನು ಐದು ವರ್ಷದಲ್ಲಿ ನಿಮಗೆ ನೀಡದೇ ಇದ್ದರೆ, ಈ ಪಕ್ಷವನ್ನೇ ನಾವು ವಿಸರ್ಜನೆ ಮಾಡ್ತೀವಿ. ಹನುಮ ಜಯಂತಿಯಂದು ಜಲಧಾರೆ ಕಾರ್ಯಕ್ರಮ ಆರಂಭ ಮಾಡುವುದಾಗಿ ಘೋಷಣೆ ಮಾಡಿದ್ರು. 

ಕರ್ನಾಟಕದಲ್ಲಿ ಭೂ ಸುಧಾರಣಾ ಕಾಯ್ದೆ ತಂದಾಗ ಕುಮಾರಣ್ಣ ಸೈಲೆಂಟ್ ಆದ್ರು ಅಂದ್ರು. 79ಎ, 79ಬಿ ನಲ್ಲಿ ಮೌನಕ್ಕೆ ಶರಣಾದೆ ನಾನು, ನಾನು ನನ್ನ ವಿದ್ಯಾಭ್ಯಾಸ ಮುಗಿದ ನಂತರ 17 ಲಕ್ಷ ಸಾಲ ತೆಗೆದುಕೊಂಡು ಥಿಯೇಟರ್ ಕಟ್ಟಿದ್ವಿ. ಆಗ ನನ್ನ ತಂದೆ ಥಿಯೇಟರ್ ಓಪನ್ ದಿನ ಒಂದು ಮಾತು ಹೇಳಿದ್ರು.

ಥಿಯೇಟರ್ ನಿಮ್ಮ ಜೀವನ ಕಾಪಾಡಲ್ಲ ಈ ಭೂಮಿ ನಿಮ್ಮ ಜೀವನ ಕಾಪಾಡುತ್ತೆ ಅಂದ್ರು. ನಾನು ಈಗ ಕೇತಗಾನಳ್ಳಿಯಲ್ಲಿ ಭೂಮಿ ತೆಗೆದುಕೊಂಡು ಅಲ್ಲೇ ಇದ್ದೀನಿ. ಆ ಭೂಮಿಯನ್ನು ನಾವು ಅನಧಿಕೃತ ವಾಗಿ ಪಡೆದಿದ್ದು ಅಂತ ಹಿಂಸೆ ಕೊಟ್ರು. 79ಎ, 79ಬಿ ಯಿಂದಾಗಿ ನಾನು ಕೂಡ ಅನೇಕ ಕಷ್ಟ ಎದುರಿಸಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments