Select Your Language

Notifications

webdunia
webdunia
webdunia
webdunia

ಸಂಧಾನಕ್ಕೆ ತೆರಳಿದ್ದ ಕೆಂಪಯ್ಯಗೆ ಜಾರಕಿಹೋಳಿಯಿಂದ ತೀವ್ರ ತರಾಟೆ

ಸಂಧಾನಕ್ಕೆ ತೆರಳಿದ್ದ ಕೆಂಪಯ್ಯಗೆ ಜಾರಕಿಹೋಳಿಯಿಂದ ತೀವ್ರ ತರಾಟೆ
ಬೆಳಗಾವಿ , ಬುಧವಾರ, 28 ಜನವರಿ 2015 (11:49 IST)
ಅಬಕಾರಿ ಸಚಿವ ಸತೀಶ್ ಜಾರಕಿಹೋಳಿ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ರಾಜೀನಾಮೆ ಹಿಂಪಡೆಯುವಂತೆ ಮನವೊಲಿಸಲು ತೆರಳಿದ್ದ ಗೃಹ ಸಚಿವ ಕೆ.ಜೆ.ಜಾರ್ಜ್ ಅವರ ವಿಶೇಷ ಸಲಹೆಗಾರ ಕಂಪಯ್ಯ ಅವರನ್ನು ಜಾರಕಿಹೋಳಿ ತೀವ್ರ ತರಾಟೆ ತೆಗೆದುಕೊಂಡಿದ್ದು, ನೀವೇನು ಕಾಂಗ್ರೆಸ್ ಹೈಕಮಾಂಡಾ, ನನ್ನ ರಾಜೀನಾಮೆ ಬಗ್ಗೆ ಕೇಳಲು ನೀವ್ಯಾರು ಎನ್ನುವ ಮೂಲಕ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. 
 
ಮಾಹಿತಿಗಳ ಪ್ರಕಾರ, ಜಾರಕಿಹೋಳಿ ಅವರು ತಮ್ಮ ರಾಜೀನಾಮೆ ಪತ್ರವನ್ನು ಹಿಂಪಡೆಯುವಂತೆ ಮನವೊಲಿಸುವ ಸಲುವಾಗಿ ಗೃಹ ಸಚಿವ ಕೆ.ಜೆ.ಜಾರ್ಜ್ ಅವರ ವಿಶೇಷ ಸಲಹೆಗಾರ ಕಂಪಯ್ಯನವರು ಇಂದು ಬೆಳಗ್ಗೆ ಜಾರಕಿ ಹೋಳಿ ಅವರ ಗೋಕಾಕ್ ನಗರದಲ್ಲಿನ ಸಚಿವರ ನಿವಾಸಕ್ಕೆ ತೆರಳಿ ಮನವೊಲಿಸಲು ಯತ್ನಿಸಿದರು. 
 
ಆದರೆ, ಕೆಂಪಯ್ಯನವರ ಮಾತಿಗೆ ಪ್ರತ್ಯುತ್ತರ ನೀಡಿದ ಸಚಿವ ಜಾರಕಿಹೋಳಿ, ನೀವೇನು ಕಾಂಗ್ರೆಸ್ ಹೈಕಮಾಂಡಾ, ನನ್ನ ರಾಜೀನಾಮೆ ಬಗ್ಗೆ ಕೇಳಲು ನೀವ್ಯಾರು, ನನ್ನ ವೈಯಕ್ತಿಕ ವಿಚಾರಗಳು ಸಾಕಷ್ಟಿವೆ. ಎಲ್ಲಾ ಸಮಸ್ಯೆಗಳನ್ನೂ ಕೂಡ ನೀವು ಬಗೆಹರಿಸಬಲ್ಲಿರಾ ಎನ್ನುವ ಮೂಲಕ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. 
 
ಅಬಕಾರಿ ಇಲಾಖಾ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದ ಸತೀಶ್ ಜಾರಕಿಹೋಳಿ, ನಿನ್ನೆ ಫ್ಯಾಕ್ಸ್ ಮೂಲಕ ಸಿಎಂ ಸಿದ್ದರಾಮಯ್ಯ ಹಾಗೂ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದರು. ಅಲ್ಲದೆ ನನಗೆ ವೈಯಕ್ತಿಕ ಸಮಸ್ಯೆಗಳಿದ್ದು, ಸಾಮಾಜಿಕ ಕಾರ್ಯದಲ್ಲಿ ತೊಡಗಲು ಸಚಿವ ಸ್ಥಾನ ಅಡ್ಡಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ನನ್ನ ರಾಜೀನಾಮೆ ಪತ್ರವನ್ನು ಅಂಗೀಕರಿಸಿ ಎಂದು ಮನವಿ ಮಾಡಿಕೊಂಡಿದ್ದರು.  
 

Share this Story:

Follow Webdunia kannada