Webdunia - Bharat's app for daily news and videos

Install App

ವಾಣಿಜ್ಯ ಮಳಿಗೆ ಮಾರಾಟ ವಂಚನೆ: ಜಾರಕಿಹೊಳಿ ಕುಟುಂಬದ ವಿರುದ್ಧ ಆರೋಪ

Webdunia
ಸೋಮವಾರ, 30 ಮೇ 2016 (18:58 IST)
ವಾಣಿಜ್ಯ ಮಳಿಗೆ ಮಾರಾಟದಲ್ಲಿ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ಸುಳದಾಳ, ಅಂಕಲಗಿ, ಗುಜನಾಳ ಗ್ರಾಮಸ್ಥರು ಉದ್ಯಮಿ ಭೀಮಶಿ ಜಾರಕಿಹೊಳಿ ಮನೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
 
ಉದ್ಯಮಿ ಭೀಮಶಿ ಜಾರಕಿಹೊಳಿ ಮಧ್ಯಸ್ಥಿಕೆಯಲ್ಲಿ 1.95 ಕೋಟಿ ಬೆಲೆಯ ವಾಣಿಜ್ಯ ಮಳಿಗೆಯನ್ನು ಬಸನಗೌಡ ಎಂಬುವವರು ಮಾರಾಟ ಮಾಡಿದ್ದರು. ಆದರೆ, ಮಾರಾಟಗಾರರಾದ ಬಸನಗೌಡ  ಅವರ ಕೈಗೆ ಇದುವರೆಗೂ ಯಾವುದೇ ಹಣ ದೊರೆತಿಲ್ಲ. ಖರೀದಿದಾರರನ್ನು ಕೇಳಿದರೆ ಭೀಮಶಿ ಜಾರಕಿಹೊಳಿ ಅವರ ಕೈಗೆ ಹಣ ನೀಡಿದ್ದೇವೆ ಎಂದು ಹೇಳುತ್ತಿದ್ದಾರೆ. ಇದಕ್ಕೆ ಬೇಸತ್ತು ವಾಣಿಜ್ಯ ಮಳಿಗೆ ಮಾರಾಟಗಾರ ಬಸನಗೌಡ ಗ್ರಾಮಸ್ಥರೊಂದಿಗೆ ಸೇರಿ, ಬೆಳಗಾವಿಯಲ್ಲಿರುವ ಉದ್ಯಮಿ ಭೀಮಶಿ ಜಾರಕಿಹೊಳಿ ಮನೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
 
ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಉದ್ಯಮಿ ಭೀಮಶಿ ಜಾರಕಿಹೊಳಿ, ನನಗೂ ಈ ವ್ಯವಹಾರಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ನನ್ನ ತೇಜೊವಧೆ ಮಾಡಲು ಶಾಸಕ ರಮೇಶ್ ಜಾರಕಿಹೊಳಿ ಯತ್ನಿಸುತ್ತಿದ್ದಾರೆ. ನನಗೆ ಹಣ ನೀಡಿರುವುದಕ್ಕೆ ಸಾಕ್ಷಿ ಇದ್ದರೆ ತೋರಿಸಿ ಎಂದು ಹೇಳಿದ್ದಾರೆ. 

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments