Select Your Language

Notifications

webdunia
webdunia
webdunia
webdunia

ವಾಣಿಜ್ಯ ಮಳಿಗೆ ಮಾರಾಟ ವಂಚನೆ: ಜಾರಕಿಹೊಳಿ ಕುಟುಂಬದ ವಿರುದ್ಧ ಆರೋಪ

ವಾಣಿಜ್ಯ ಮಳಿಗೆ ಮಾರಾಟ ವಂಚನೆ: ಜಾರಕಿಹೊಳಿ ಕುಟುಂಬದ ವಿರುದ್ಧ ಆರೋಪ
ಬೆಳಗಾವಿ , ಸೋಮವಾರ, 30 ಮೇ 2016 (18:58 IST)
ವಾಣಿಜ್ಯ ಮಳಿಗೆ ಮಾರಾಟದಲ್ಲಿ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ಸುಳದಾಳ, ಅಂಕಲಗಿ, ಗುಜನಾಳ ಗ್ರಾಮಸ್ಥರು ಉದ್ಯಮಿ ಭೀಮಶಿ ಜಾರಕಿಹೊಳಿ ಮನೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
 
ಉದ್ಯಮಿ ಭೀಮಶಿ ಜಾರಕಿಹೊಳಿ ಮಧ್ಯಸ್ಥಿಕೆಯಲ್ಲಿ 1.95 ಕೋಟಿ ಬೆಲೆಯ ವಾಣಿಜ್ಯ ಮಳಿಗೆಯನ್ನು ಬಸನಗೌಡ ಎಂಬುವವರು ಮಾರಾಟ ಮಾಡಿದ್ದರು. ಆದರೆ, ಮಾರಾಟಗಾರರಾದ ಬಸನಗೌಡ  ಅವರ ಕೈಗೆ ಇದುವರೆಗೂ ಯಾವುದೇ ಹಣ ದೊರೆತಿಲ್ಲ. ಖರೀದಿದಾರರನ್ನು ಕೇಳಿದರೆ ಭೀಮಶಿ ಜಾರಕಿಹೊಳಿ ಅವರ ಕೈಗೆ ಹಣ ನೀಡಿದ್ದೇವೆ ಎಂದು ಹೇಳುತ್ತಿದ್ದಾರೆ. ಇದಕ್ಕೆ ಬೇಸತ್ತು ವಾಣಿಜ್ಯ ಮಳಿಗೆ ಮಾರಾಟಗಾರ ಬಸನಗೌಡ ಗ್ರಾಮಸ್ಥರೊಂದಿಗೆ ಸೇರಿ, ಬೆಳಗಾವಿಯಲ್ಲಿರುವ ಉದ್ಯಮಿ ಭೀಮಶಿ ಜಾರಕಿಹೊಳಿ ಮನೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
 
ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಉದ್ಯಮಿ ಭೀಮಶಿ ಜಾರಕಿಹೊಳಿ, ನನಗೂ ಈ ವ್ಯವಹಾರಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ನನ್ನ ತೇಜೊವಧೆ ಮಾಡಲು ಶಾಸಕ ರಮೇಶ್ ಜಾರಕಿಹೊಳಿ ಯತ್ನಿಸುತ್ತಿದ್ದಾರೆ. ನನಗೆ ಹಣ ನೀಡಿರುವುದಕ್ಕೆ ಸಾಕ್ಷಿ ಇದ್ದರೆ ತೋರಿಸಿ ಎಂದು ಹೇಳಿದ್ದಾರೆ. 

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳೆಯ ಮೇಲೆ ಗ್ಯಾಂಗ್‌ರೇಪ್ ಎಸಗಿ ವಿಡಿಯೋ ಮಾಡಿದ ಐವರು ಆರೋಪಿಗಳ ಬಂಧನ