Select Your Language

Notifications

webdunia
webdunia
webdunia
webdunia

ಜಾರಕಿಹೋಳಿಗೆ ಶೀಘ್ರದಲ್ಲಿಯೇ ಹೆಚ್ಚುವರಿ ಖಾತೆ ಸಾಧ್ಯತೆ...?!

ಜಾರಕಿಹೋಳಿಗೆ ಶೀಘ್ರದಲ್ಲಿಯೇ ಹೆಚ್ಚುವರಿ ಖಾತೆ ಸಾಧ್ಯತೆ...?!
ಬೆಂಗಳೂರು , ಗುರುವಾರ, 26 ಫೆಬ್ರವರಿ 2015 (13:44 IST)
ಖಾತೆ ಬದಲಾವಣೆಗಾಗಿ ರಾಜೀನಾಮೆ ಸಲ್ಲಿಸಿ ಸುದ್ದಿಯಾಗಿದ್ದ ಅಬಕಾರಿ ಸಚಿವ ಸತೀಶ್ ಜಾರಕಿಹೋಳಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರೂ ಕೊನೆಗೂ ಒಂದು ಖಾತೆಯನ್ನು ಹೆಚ್ಚುವರಿಯಾಗಿ ವಹಿಸಲು ಮುಂದಾಗಿದ್ದಾರೆ.
 
ಮುಖ್ಯಮಂತ್ರಿ ಇಂದು ಅಧಿಕೃತವಾಗಿ ತಮ್ಮ ಕಚೇರಿಯಿಂದ ರಾಜಭವನಕ್ಕೆ ಶಿಫಾರಸ್ಸು ಪತ್ರ ರವಾನಿಸಲಿದೆ ಎನ್ನಲಾಗಿದ್ದು, ಈ ಸಂಬಂಧ ಸಿಎಂ ಸಿದ್ದರಾಮಯ್ಯ ನಿನ್ನೆ ತಮ್ಮ ಆಪ್ತರ ಜೊತೆ ಸುಧೀರ್ಘವಾಗಿ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಂಡಿದ್ದರು. 
 
ಸಮಾಜ ಕಲ್ಯಾಣ ಖಾತೆ ಕೋರಿ ಜಾರಕಿಹೋಳಿ ಅವರು ರಾಜಿನಾಮೆ ನೀಡಿದ್ದರು. ಆದರೆ ಅದು ಸಿಎಂ ಆಪ್ತ ಆಂಜನೇಯ ಅವರು ನಿರ್ವಹಿಸುತ್ತಿದ್ದು, ರಾಜೀನಾಮೆ ಪ್ರಹಸನ ಮುಕ್ತಾಯಗೊಳಿಸುವಾಗ ಜಾರಕಿಹೊಳಿ ಅವರಿಗೆ ತಮ್ಮ ಬಳಿ ಇರುವ ಸಣ್ಣ ಕೈಗಾರಿಕೆ ಖಾತೆ ನೀಡುವುದಾಗಿ ಸಿದ್ದರಾಮಯ್ಯ ಭರವಸೆ ನೀಡಿದ್ದರು. ಅದರಂತೆ ಸಿಎಂ ಸಿದ್ದರಾಮಯ್ಯನವರು ಜಾರಕಿಹೋಳಿ ಅವರಿಗೆ ಹೆಚ್ಚುವರಿ ಖಾತೆ ನೀಡಲು ಮುಂದಾಗಿದೆ. 

Share this Story:

Follow Webdunia kannada