Select Your Language

Notifications

webdunia
webdunia
webdunia
webdunia

ಬರಿಗಾಲಿನಲ್ಲಿ ಬೆಟ್ಟ ಏರಿ ಹರಕೆ ತೀರಿಸಿದ ಜನಾರ್ಧನರೆಡ್ಡಿ

ಬರಿಗಾಲಿನಲ್ಲಿ ಬೆಟ್ಟ ಏರಿ ಹರಕೆ ತೀರಿಸಿದ ಜನಾರ್ಧನರೆಡ್ಡಿ
ಮೈಸೂರು , ಶನಿವಾರ, 4 ಜುಲೈ 2015 (18:18 IST)
ರಾಜ್ಯದ ಮಾಜಿ ಸಚಿವ ಜನಾರ್ಧನರೆಡ್ಡಿ ಹಾಗೂ ಸಂಸದ ಶ್ರೀರಾಮುಲು ಅವರು ಇಂದು ನಗರದ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ಹರಕೆ ಸಲ್ಲಿಸಿದರು. 
 
ಬರಿಗಾಲಿನಲ್ಲಿ 1000 ಮೆಟ್ಟಿಲುಗಳನ್ನು ಏರುವ ಮೂಲಕ ಚಾಮುಂಡಿ ದೇವಿಯ ಹರಕೆ ತೀರಿಸಿದ ಇಬ್ಬರೂ ನಾಯಕರು, ತಮ್ಮ ಕುಟುಂಬ ಸದಸ್ಯರೊಂದಿಗೆ ಚಾಮುಂಡಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.  
 
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಜನಾರ್ಧನರೆಡ್ಡಿ, ನಮ್ಮ ತಂದೆ ತಾಯಿಗಳೂ ಮೊದಲು ಎರಡು ವರ್ಷಗಳ ಕಾಲ ಮೈಸೂರಿನಲ್ಲಿಯೇ ತಂಗಿದ್ದರು. ಆಗಿನಿಂದಲೂ ಕೂಡ ದೇವಿಯ ದರ್ಶನ ಪಡೆಯುತ್ತಿದ್ದು, ಪ್ರಸ್ತುತವೂ ಬಂದಿದ್ದೇನೆ. ಹರಕೆ ತೀರಿಸುವ ಸಲುವಾಗಿ ಬಂದಿದ್ದೇನೆಯೇ ಹೊರತು ಬೇರಾವ ಉದ್ದೇಶದಿಂದಲೂ ಅಲ್ಲ ಎಂದು ಸ್ಪಷ್ಟಪಡಿಸಿದರು. 
 
ಜನಾರ್ಧನರೆಡ್ಡಿಯವರಿಗೆ ಅವರ ಪತ್ನಿ ಹಾಗೂ ಪುತ್ರಿ ಸಾಥ್ ನೀಡಿದ್ದರು. 
 

Share this Story:

Follow Webdunia kannada