Select Your Language

Notifications

webdunia
webdunia
webdunia
webdunia

ನನ್ನ ಮಾತು ಕೇಳದಿದ್ರೆ ಸಿಎಂ ರಾಜಕೀಯ ಭವಿಷ್ಯ ಅಂತ್ಯ: ಪೂಜಾರಿ

ನನ್ನ ಮಾತು ಕೇಳದಿದ್ರೆ ಸಿಎಂ ರಾಜಕೀಯ ಭವಿಷ್ಯ ಅಂತ್ಯ: ಪೂಜಾರಿ
ಮಂಗಳೂರು , ಶುಕ್ರವಾರ, 6 ಜನವರಿ 2017 (07:28 IST)
ನಮ್ಮ ಮಾತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವತ್ತೂ ಬೆಲೆ ಕೊಡುವುದಿಲ್ಲ. ಆದರೆ, ಈ ಬಾರಿ ನನ್ನ ಮಾತಿನ ವಿರುದ್ಧ ನಡೆದರೆ ಸಿಎಂ ರಾಜಕೀಯ ಜೀವನ ಅಂತ್ಯವಾಗುವುದು ಗ್ಯಾರಂಟಿ ಎಂದು ಹಿರಿಯ ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿ ಭವಿಷ್ಯ ನುಡಿದಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಇತ್ತೀಚೆಗೆ ನಿಧನರಾಗಿದ್ದ ಸಚಿವ ಮಹಾದೇವಪ್ರಸಾದ್ ಅವರ ಪತ್ನಿ ಅಥವಾ ಅವರ ಮಗನಿಗೆ ಟಿಕೆಟ್ ನೀಡಬೇಕು. ಅನುಕಂಪದ ಮತವಾದರೂ ಬರುತ್ತವೆ. ಅದನ್ನು ಬಿಟ್ಟು ಬೇರೆ ಯಾರಿಗೋ ಟಿಕೆಟ್ ನೀಡಿದರೆ ಕಾಂಗ್ರೆಸ್‌ಗೆ ಸೋಲು ಖಚಿತ. ಈ ಈ ಬಾರಿ ನನ್ನ ಮಾತಿನ ವಿರುದ್ಧ ನಡೆದರೆ ಸಿಎಂ ರಾಜಕೀಯ ಜೀವನ ಅಂತ್ಯವಾಗುವುದು ಗ್ಯಾರಂಟಿ ಎಂದರು. 
 
ಶೋಕಾಚರಣೆ ಸಂದರ್ಭದಲ್ಲಿ ಸಿಎಂ ಅದ್ಧೂರಿ ಮದುವೆಯಲ್ಲಿ ಭಾಗಿ
 
ಮಹದೇವಪ್ರಸಾದ್ ಅವರ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮೂರು ದಿನ ಶೋಕಾಚರಣೆ ಆಚರುಸುತ್ತಿದೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ ಉದ್ಯಮಿ ಬಿ.ಆರ್.ಶೆಟ್ಟಿ ಮಗನ ಮದುವೆಯಲ್ಲಿ ಭಾಗವಹಿಸಲು ಮಂಗಳೂರಿಗೆ ವಿಶೇಷ ವಿಮಾನದಲ್ಲಿ ಬಂದಿದ್ದಾರೆ. ಸಿಎಂ ಸಿದ್ದರಾಮಯ್ಯಗೆ ಬುದ್ಧಿ ಇಲ್ಲ ಅಂತ ಸಾಬೀತುಪಡಿಸಲು ಇದಕ್ಕಿಂತ ಒಳ್ಳೆ ನಿದರ್ಶನ ಬೇಕೆ ಎಂದು ಪ್ರಶ್ನಿಸಿದರು. 
 
ದಕ್ಷಿಣ ಕನ್ನಡ ಜಿಲ್ಲೆಯೆ ಬೆಂಕಿ ಹಚ್ಚಲು ನಮಗೂ ಗೊತ್ತು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಕುಡಿದ ಅಮಲಿನಲ್ಲಿ ಹೇಳಿಕೆ ನೀಡಿದ್ದಾರೆ. ಅವರಿಗೆ ಕನಿಷ್ಠ ಜ್ಞಾನವೂ ಇಲ್ಲ. ಆಕ್ಷೇಪಾರ್ಹ ಹೇಳಿಕೆ ನೀಡಿರುವ ಸಂಸದರು ಕರಾವಳಿಯ ಪ್ರತಿ ಮನೆಗಳಿಗೆ ತೆರಳಿ ಕ್ಷಮೆಯಾಚಿಸಬೇಕು ಎಂದು ಹಿರಿಯ ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿ ಆಗ್ರಹಿಸಿದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮಾರುಕಟ್ಟೆಗೆ ಲಗ್ಗೆ ಹಾಕಲಿವೆ ಸ್ಯಾಂಸಂಗ್ ಎಸ್8 ಫೋನ್‌ಗಳು