Select Your Language

Notifications

webdunia
webdunia
webdunia
webdunia

ವಾಸು ಆಗಮನದಿಂದ ಬೇಸತ್ತು ಸಭೆಯನ್ನೇ ರದ್ದು ಮಾಡಿದ ಜಮೀರ್ ಅಹ್ಮದ್

ವಾಸು ಆಗಮನದಿಂದ ಬೇಸತ್ತು ಸಭೆಯನ್ನೇ ರದ್ದು ಮಾಡಿದ ಜಮೀರ್ ಅಹ್ಮದ್
ಗುಬ್ಬಿ: , ಭಾನುವಾರ, 14 ಫೆಬ್ರವರಿ 2016 (16:38 IST)
ಜೆಡಿಎಸ್ ಶಾಸಕರ ನಡುವೆ ವೈಮನಸ್ಸಿನ ಹಿನ್ನೆಲೆಯಲ್ಲಿ ಗುಬ್ಬಿ ಪಟ್ಟಣದಲ್ಲಿ ನಡೆಯಬೇಕಿದ್ದ ಸಭೆ ರದ್ದಾಗಿದೆ. ಇಂದು ಮಧ್ಯಾಹ್ನ ಗುಬ್ಬಿ ಪಟ್ಟಣದಲ್ಲಿ ನಡೆದ ಅಲ್ಪಸಂಖ್ಯಾತ ಶಾಸಕರ ಸಭೆಗೆ  ಗುಬ್ಬಿ ಶಾಸಕ ವಾಸು ಆಹ್ವಾನವಿಲ್ಲದೇ ಹೋಗಿದ್ದರು.

ಇದರಿಂದ ಅಸಮಾಧಾನಗೊಂಡ ಜಮೀರ್ ಅಹ್ಮದ್ ಸಭೆಯನ್ನೇ ರದ್ದುಮಾಡಿದರು.  ದೇವೇಗೌಡರು ಜಮೀರ್ ಅಹ್ಮದ್ ಖಾನ್ ಅವರನ್ನು ಮೀರ್ ಸಾದಿಕ್ ಎಂದು ಕರೆದಿರುವುದು ವಿವಾದದ ಸ್ವರೂಪ ಪಡೆದುಕೊಂಡಿದ್ದು,  ಈ ಸಂಬಂಧ ಜಮೀರ್ ಅಲ್ಪಸಂಖ್ಯಾತರ ಸಭೆ ಕರೆದಿದ್ದರು.

ಇದು ಜೆಡಿಎಸ್ ಸಭೆಯಲ್ಲ, ಅಲ್ಪಸಂಖ್ಯಾತ ಶಾಸಕರ ಸಮಸ್ಯೆ ನಿವಾರಣೆಗೆ ಚರ್ಚಿಸುವುದಕ್ಕೆ ಕರೆದಿದ್ದ ಸಭೆ. ಈ ಸಭೆಗೆ ವಾಸು ಬಂದಿದ್ದು ಜಮೀರ್‌ಗೆ ಅಸಮಾಧಾನ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ದಿಢೀರನೇ ಸಭೆಯನ್ನು ಜಮೀರ್ ರದ್ದುಮಾಡಿ ಹೊರಟರು. 

Share this Story:

Follow Webdunia kannada