ಕ್ವಾಂಟಿಕೋ ಟಿವಿ ಶೋಗಾಗಿ ಪೀಪಲ್ಸ್ ಚಾಯ್ಸ್ ಅವಾರ್ಡ್ ಗಳಿಸಿದ್ದೇ ಗಳಿಸಿದ್ದು ನಟಿ ಪ್ರಿಯಾಂಕ ಛೋಪ್ರಾ ಫುಲ್ ಬ್ಯುಸಿಯಾಗಿದ್ದಾರೆ. ಕ್ವಾಂಟಿಕೋ ಟೀ ಶೋದಲ್ಲಿ ಪ್ರಿಯಾಂಕ ಭಾಗವಹಿಸುತ್ತಿದ್ದಾಗಲೇ ಅವರ ಭಾಜೀರಾಮ್ ಮಸ್ತಾನಿ ಸಿನಿಮಾ ರಿಲೀಸ್ ಗೆ ರೆಡಿಯಾಗಿತ್ತು. ಆದ್ರೆ ಅತ್ತ ಟಿವಿ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದ್ದರಿಂದ ಪ್ರಿಯಾಂಕ ಪ್ರಚಾರ ಕಾರ್ಯದಲ್ಲಿ ಅಷ್ಟೊಂದಾಗಿ ಭಾಗವಹಿಸಿರಲಿಲ್ಲ. ಇದೀಗ ಅವರ ಗಂಗಾಜಲ್ ಸಿನಿಮಾದ ವಿಚಾರದಲ್ಲೂ ಅದೇ ಆಗಿದೆ.
ಕ್ವಾಂಟಿಕೋ ಟಿವಿ ಶೋದಲ್ಲಿ ಭಾಗವಹಿಸಿದ್ದೇ ತಡ ಪಿಗ್ಗಿ ಫುಲ್ ಬ್ಯುಸಿಯಾಗಿ ಬಿಟ್ಟಿದ್ದಾರೆ. ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲೂ ಪ್ರಿಯಾಕ ಪಾಲ್ಗೊಳ್ಳುತ್ತಿರೋದರಿಂದ ಅದರಲ್ಲೂ ಪಿಗ್ಗಿ ತೊಡಗಿಸಿಕೊಂಡಿದ್ದಾರೆ. ಹಾಗಾಗಿ ಪ್ರಿಯಾಂಕ ಅವರಿಗೆ ತಮ್ಮ ಜೈ ಗಂಗಾಜಲ್ ಸಿನಿಮಾದ ಪ್ರಮೋಷನ್ ನಲ್ಲಿ ಭಾಗವಹಿಸೋದು ಸಾಧ್ಯವಾಗುತ್ತಿಲ್ಲ.ಆದ್ರೆ ಈ ಮಧ್ಯೆ ಸಮಯ ಮಾಡಿಕೊಂಡು ಪ್ರಿಯಾಂಕ ಸಾಮಾಜಿಕ ಜಾಲತಾಣಗಳ ಮೂಲಕವೇ ತಮ್ಮ ಸಿನಿಮಾದ ಪ್ರಮೋಷನ್ ಕೆಲಸದಲ್ಲಿ ತೊಡಗಿಕೊಂಡಿದ್ದಾರಂತೆ.
ಗಂಗಾ ನದಿಯ ಕುರಿತಾದ ಗಂಗಾಜಲ್ ಸಿನಿಮಾವನ್ನು ಪ್ರಕಾಶ್ ಝಾ ಅವರು ನಿರ್ದೇಶನ ಮಾಡಿದ್ದಾರೆ. ನಿರ್ಮಾಣದ ಜವಬ್ದಾರಿಯನ್ನು ಕೂಡ ಅವರೇ ಹೊತ್ತುಕೊಂಡಿದ್ದಾರೆ.ಅಲ್ಲದೇ ಅವರು ಅಭಿನಯಿಸಿದ್ದಾರೆ ಕೂಡ. ಈ ಸಿನಿಮಾ ಮುಂದಿನ ತಿಂಗಳು ಪ್ರೇಕ್ಷಕರೆದುರಿಗೆ ಬರಲಿದೆ.