ಸಚಿವ ಎಂ.ಬಿ. ಪಾಟೀಲ್ ವಿರುದ್ಧ ಶ್ರೀಶೈಲ ಜಗದ್ಗುರು ಗುಡುಗು

Webdunia
ಗುರುವಾರ, 26 ಏಪ್ರಿಲ್ 2018 (17:29 IST)
ಸಚಿವ ಎಂ.ಬಿ. ಪಾಟೀಲ್ ಮತಕ್ಷೇತ್ರ ಬಬಲೇಶ್ವರಕ್ಕೆ ಹೋಗುವಾಗ ಪೊಲೀಸ್ ಭದ್ರತೆ ತೆಗೆದುಕೊಂಡು ಹೋಗ್ತೇನಿ ಎಂದು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಹೇಳಿದ್ದಾರೆ.
ವಿಜಯಪುರದಲ್ಲಿ ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಭಕ್ತರು ಕರೆದ್ರೆ ಜಗದ್ಗುರುಗಳು ಹೋಗುವುದು ಸಾಮಾನ್ಯ. ಪೂರ್ವಾಗ್ರಹ ಪೀಡೀತರಾಗಿ ನಮಗೆ ತೊಂದರೆ ಕೊಡಲಾಗುತ್ತಿದೆ ಎಂದು ಆರೋಪಿಸಿದರು.
 
ನಮ್ಮ ಕಾರ್ ಅಡ್ಡಗಟ್ಟಿ ಕೆಲವರು  ಧಾರ್ಮಿಕ ಕಾರ್ಯಕ್ಕೆ ಅಡ್ಡಿ ಉಂಟು ಮಾಡಿ ಸಚಿವ ಎಂ.ಬಿ. ಪಾಟೀಲರ ಪರ ಘೋಷಣೆ ಕೂಗಿದರು. ಧರ್ಮ ಮತ್ತು ಭಕ್ತರ ಸಲುವಾಗಿ ಎಂಥ ದೌರ್ಜನ್ಯ ಕೂಡ ಎದುರಿಸಲು ನಾವು ಸಿದ್ದ. ಹೆದರಿಸಿ ಬೆದರಿಸಿ ನಮ್ಮ ಕರ್ತವ್ಯಕ್ಕೆ ಧಕ್ಕೆ ಮಾಡಿದರೆ ಜಗ್ಗೋದಿಲ್ಲ ಎಂದು ಗುಡುಗಿದರು.
 
ಭಕ್ತರ ಇಷ್ಟಾರ್ಥ ಈಡೇರಿಸುವುದು ನಮ್ಮ ಕರ್ತವ್ಯ. ಯಾರೋ ಬಾಡಿಗೆ ಜನ ವಿರೋಧಿಸಿದರೆ ನಾವು ಹಿಂದೆ ಸರಿಯೋದಿಲ್ಲ. ಚುನಾವಣೆ ಒಂದೇ ಕ್ಷೇತ್ರದಲ್ಲಿ ಇಲ್ಲ, ನೀತಿ ಸಂಹಿತೆ ರಾಜ್ಯದೆಲ್ಲೆಡೆ ಇದೆ. ಉಳಿದೆಡೆ ಭಕ್ತರು ವಿಜಯವಾಗಲಿ ಎಂದು ಆಶೀರ್ವಾದ ಪಡೆಯುತ್ತಾರೆ. ದುರ್ದೈವ ಬಬಲೇಶ್ವರ ಕ್ಷೇತ್ರದಲ್ಲಿ ಮಾತ್ರ ಕಾಲಿಡಲೂ ಬಿಡುತ್ತಿಲ್ಲ. ಬಬಲೇಶ್ವರದಲ್ಲಿ ಕಾಲಿಟ್ಟರೆ ಕೂಡಲೇ ಯಾರದೋ ಪ್ರಚಾರಕ್ಕೆ ಬಂದಂತೆ ಪತ್ರಿಕಾ ಹೇಳಿಕೆ ನೀಡುತ್ತಾರೆ ಎಂದು ಶಿವಾಚಾರ್ಯರು ಬೇಸರ ವ್ಯಕ್ತಪಡಿಸಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬಿಜೆಪಿ ಭೀಷ್ಮ ಎಲ್‌.ಕೆ. ಅಡ್ವಾಣಿಗೆ 98ನೇ ಜನ್ಮದಿನದ ಸಂಭ್ರಮ: ಮೋದಿ ಸೇರಿ ಗಣ್ಯರ ಶುಭಾಶಯ

ಪರಪ್ಪನ ಅಗ್ರಹಾರದಲ್ಲಿ ಕೈದಿಗಳಿಗೆ ವಿಐಪಿ ಟ್ರೀಟ್ಮೆಂಟ್: ಮಾಧ್ಯಮಗಳ ಪ್ರಶ್ನೆಗೆ ಸಿಎಂ ಏನು ಹೇಳಿದ್ರು

ಕೆಲವರು ಮುಳುಗುವುದಕ್ಕೆ ಪ್ರಾಕ್ಟೀಸ್ ಮಾಡ್ತಿದ್ದಾರೆ: ರಾಹುಲ್ ಗಾಂಧಿಗೆ ಮೋದಿ ಟಾಂಗ್

ರಾಷ್ಟ್ರಪತಿ ಜೊತೆ ವಿ ಸೋಮಣ್ಣ ಸೌತ್ ಆಫ್ರಿಕಾ ಪ್ರವಾಸ: ಮೋದಿಗೆ ಥ್ಯಾಂಕ್ಸ್ ಹೇಳಿದ ಸಚಿವ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಮುಂದಿನ ಸುದ್ದಿ
Show comments