ಕಾಂಗ್ರೆಸ್ ಶಾಸಕ ಗೋವಿಂದರಾಜು ಅವರದ್ದು ಎನ್ನಲಾದ ಡೈರಿ ಬಹಿರಂಗಗೊಂಡು ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದ್ದು, ಬಿಜೆಪಿ ನಾಯಕರು ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯಿಸುತ್ತಿದ್ದಾರೆ.
ಡೈರಿ ಬಹಿರಂಗವಾಗುತ್ತಿದ್ದಂತೆ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಹಿರಿಯ ನಾಯಕರಾದ ಸುರೇಶ್ ಕುಮಾರ್ ಮತ್ತು ಅಶ್ವತ್ಥ ನಾರಾಯಣ ಪತ್ರಿಕಾಗೋಷ್ಠಿ ನಡೆಸಿದರು.
ಈಗ ನಿಜವಾದ ಸತ್ಯಮೇವ ಜಯತೇ ಆಗಿದೆ.ಕಾಂಗ್ರೆಸ್ ಮುಖವಾಡ ಕಳಚಿ ಬಿದ್ದಿದೆ .ಯಾರನ್ನು ಹುಚ್ಚಾಸ್ಪತ್ರೆಗೆ ಕಳಿಸಬೇಕು ಕಾಂಗ್ರೆಸ್ನವರೇ ಹೇಳಲಿ. ರಾಜ್ಯದ ಹಣವನ್ನ ಕೋಟಿ ಕೋಟಿ ಲೆಕ್ಕದಲ್ಲಿ ಕಪ್ಪ ಕಾಣಿಕೆಯನ್ನಾಗಿ ಕಾಂಗ್ರೆಸ್ ಹೈಕಮಾಂಡ್ಗೆ ನೀಡಲಾಗಿದೆ. ಹೀಗಾಗಿ ನೈತಿಕ ಹೊಣೆ ಹೊತ್ತು ಸಿಎಂ ರಾಜೀನಾಮೆ ಕೊಡಬೇಕು ಎಂದು ಸುರೇಶ್ ಕುಮಾರ್ ಆಗ್ರಹಿಸಿದ್ದಾರೆ.
ಡೈರಿಯಲ್ಲಿ ಬರೆದಿರುವ ಆರ್.ಜಿ. ಆಫೀಸ್ ಅಂದ್ರೆ ಯಾರಿಗಾದ್ರೂ ಅದು ರಾಹುಲ್ ಗಾಂಧಿ ಕಚೇರಿ ಅಂತಾ ಗೊತ್ತಾಗುತ್ತೆ. ಸಿಎಂ ಈ ಬಗ್ಗೆ ಸಬೂಬು ನೀಡದೇ ತಮ್ಮ ಸ್ಥಾನವನ್ನು ತ್ಯಜಿಸಲಿ ಎಂದು ಉಭಯನಾಯಕರು ಹೇಳಿದ್ದಾರೆ.