ಸಂಪುಟ ರಚನೆ ವಿಚಾರದಲ್ಲಿ ಭಿನ್ನಮತ ಇರೋದು ನಿಜ: ಸಿದ್ದರಾಮಯ್ಯ

Webdunia
ಶುಕ್ರವಾರ, 8 ಜೂನ್ 2018 (15:55 IST)
ಬಾಗಲಕೋಟೆ: ಸಂಪುಟ ಪುನರ್ ರಚನೆ ವಿಚಾರದಲ್ಲಿ  ನಮ್ಮಲ್ಲಿ ಭಿನ್ನಮತ ಇರೋದು ನಿಜ. ಆದ್ರೆ ಅದನ್ನು ಸರಿಪಡಿಸಿಕೊಂಡು ಹೋಗ್ತೀವಿ, ನಮ್ಮನ್ನ ಸೆಳೆಯೋದ್ರಲ್ಲಿ  ಬಿಜೆಪಿಯವರು ಸಕ್ಸಸ್ ಆಗೋದಿಲ್ಲ ಅಂತ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಅವರು ಬಾಗಲಕೋಟೆ ಜಿಲ್ಲೆಯ ಬಾದಾಮಿ ಮತಕ್ಷೇತ್ರ ವ್ಯಾಪ್ತಿಯಲ್ಲಿ ಜನರಿಗೆ ಕೃತಜ್ಞತೆ ಹೇಳುವ ಸಲುವಾಗಿ ಎರಡನೇ ದಿನದ ಪ್ರವಾಸ ಕೈಗೊಂಡಿದ್ದು, ಈ ವೇಳೆ ಮಾಧ್ಯಮಗಳಿಗೆ ಮಾತನಾಡಿದ ಸಿದ್ದರಾಮಯ್ಯ, ಈ ಹಿಂದೆಯೂ ಬಿಜೆಪಿಯವರು ನಮ್ಮವರನ್ನ ಸೆಳೆಯುವ ಯತ್ನ ಮಾಡಿದ್ದರು, ಅದು ಆಗಲಿಲ್ಲ ಈಗ ನಮ್ಮಲ್ಲಿ ಭಿನ್ನಮತ ಇರೋದು ನಿಜ. ಇದರಲ್ಲಿ ಬಿಜೆಪಿ ಮಂದಿ ಯಶಸ್ಸು ಕಾಣೋದಿಲ್ಲ. ನಮ್ಮಲ್ಲಿರೋ ಭಿನ್ನಮತ ಸರಿಪಡಿಸಿಕೊಳ್ತೀವಿ ಎಂದು ಹೇಳಿದರು. 
 
ಇನ್ನು ಮಾಜಿ ಸಚಿವ ಎಚ್.ಎಮ್.ರೇವಣ್ಣವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಇದಕ್ಕೆ ನನ್ನದು ನೋ ಕಾಮೆಂಟ್ ಎಂದು ಹೇಳಿದ್ರು. ಇತ್ತ ಎರಡನೇ ದಿನದ ಪ್ರವಾಸದಲ್ಲಿ ಆಡಗಲ್, ಕುಟಕನಕೇರಿ, ಹಿರೇ ಮುಚ್ಚಳಗುಡ್ಡ ಸೇರಿದಂತೆ ಅನೇಕ ಗ್ರಾಮ ಗಳಿಗೆ ಭೇಟಿ ನೀಡಿದ್ರು. ಈ ವೇಳೆ ಜನ್ರು ಡೊಳ್ಳು ಬಾರಿಸಿ ಸ್ವಾಗತಿಸಿದರೆ, ಇತ್ತ  ಸಿದ್ದರಾಮಯ್ಯನವರ ಮೆರವಣಿಗೆಯಲ್ಲಿ ಟಗರನ್ನು ಎತ್ತಿ ಹಿಡಿದು ಸಂಭ್ರಮಿಸಿರುವ ದೃಶ್ಯಗಳು ಕಂಡು ಬಂದವು. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಕರ್ನಾಟಕ ಕುರ್ಚಿ ಕದನ ಕ್ಲೈಮ್ಯಾಕ್ಸ್ ಹಂತದಲ್ಲಿರುವಾಗಲೇ ತಮ್ಮ ನಿರ್ಧಾರ ಪ್ರಕಟಿಸಿದ ಡಿಕೆ ಶಿವಕುಮಾರ್

ಉಡುಪಿ ಕೃಷ್ಣನ ಊರಿನಲ್ಲಿ ಪ್ರಧಾನಿ ಮೋದಿ ಇಂದು ಏನೇನು ಮಾಡಲಿದ್ದಾರೆ

ಡಿಕೆ ಶಿವಕುಮಾರ್ ಗೆ ಸಿಎಂ ಹುದ್ದೆ ಕೊಟ್ಟರೆ ಸಿದ್ದರಾಮಯ್ಯ ಬಣದ ನಡೆ ಏನಿರಬಹುದು

Karnataka Weather: ಇಂದು ರಾಜ್ಯದಲ್ಲಿ ಮಳೆಯಿರುತ್ತಾ, ಇಲ್ಲಿದೆ ಹವಾಮಾನ ವರದಿ

ಮುಂದಿನ ಸುದ್ದಿ
Show comments