ಸ್ಟಾರ್ ಕಾಮೆಡಿಯನ್ ಕಪಿಲ್ ಶರ್ಮಾ ತಮ್ಮ ಹಾಸ್ಯ ಪ್ರವೃತ್ತಿಗೆ ಮತ್ತು ಕಾಮಿಕ್ ಕೌಶಲ್ಯಗಳಿಗೆ ಹೆಸರಾದವರು. ಆದರೆ ತಮಗೆ ಅನ್ಯಾಯವಾದಾಗ ಕೋಪತಾಪ ವ್ಯಕ್ತಪಡಿಸಲು ಕಪಿಲ್ ಹಿಂಜರಿಯುವುದಿಲ್ಲ. ಕಪಿಲ್ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿಯ ಅಚ್ಚೆ ದಿನ್ ಪ್ರಶ್ನಿಸಿ ಟ್ವಿಟರ್ನಲ್ಲಿ ತಮ್ಮ ಕೋಪ ಹೊರಹಾಕಿದ್ದಾರೆ.
ತಾವು ಕಳೆದ ಐದುವರ್ಷಗಳಲ್ಲಿ ಆದಾಯ ತೆರಿಗೆ ಪಾವತಿ ಮಾಡಿದ ಮೊತ್ತ ಮತ್ತು ನಗರದಲ್ಲಿ ಕಚೇರಿ ಸ್ಥಾಪಿಸಲು ಬಿಎಂಸಿಗೆ ತಾವು ನೀಡಿದ ಲಂಚದ ಬಗ್ಗೆ ಕೆಲವು ಟ್ವೀಟ್ ಮಾಡಿದರು.
ಕಳೆದ ಐದು ವರ್ಷಗಳಿಂದ ನಾನು 15 ಕೋಟಿ ಆದಾಯ ತೆರಿಗೆ ಪಾವತಿ ಮಾಡಿದೆ ಹಾಗೂ ಕಚೇರಿ ಸ್ಥಾಪನೆಗೆ 5 ಲಕ್ಷ ಲಂಚ ನೀಡಿದೆ. ಯೆ ಹೈನ್ ಆಪ್ಕೆ ಅಚ್ಚೆ ದಿನ್ ಎಂದು ಪ್ರಧಾನಿಗೆ ಟ್ವೀಟ್ ಮಾಡಿ ಪ್ರಶ್ನಿಸಿದ್ದಾರೆ.
ಕುತೂಹಲಕರ ಸಂಗತಿಯೆಂದರೆ ಕಪಿಲ್ ತಮ್ಮ ಶೋನಲ್ಲಿ ಪ್ರಧಾನ ಮಂತ್ರಿ ಅತಿಥಿಯಾಗಿ ಬರಬೇಕೆಂಬ ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದ್ದರು.