Select Your Language

Notifications

webdunia
webdunia
webdunia
webdunia

ಪ್ರಧಾನಿ ನರೇಂದ್ರ ಮೋದಿ ಗ್ರಹಿಕೆ ತಪ್ಪೇ: ಹೆಚ್.ಕೆ.ಪಾಟೀಲ್

ಪ್ರಧಾನಿ ನರೇಂದ್ರ ಮೋದಿ ಗ್ರಹಿಕೆ ತಪ್ಪೇ: ಹೆಚ್.ಕೆ.ಪಾಟೀಲ್
ಬೆಳಗಾವಿ , ಬುಧವಾರ, 1 ಜುಲೈ 2015 (16:06 IST)
ನಗರದ ಸುವರ್ಣಸೌಧದಲ್ಲಿ ಇಂದು ಮೂರನೇ ದಿನದ ಮುಂಗಾರು ಅಧಿವೇಶನ ನಡೆಯುತ್ತಿದ್ದು, ವಿಧಾನಸಭಾ ಕಲಾಪದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಹೆಚ್.ಕೆ.ಪಾಟೀಲ್ ವಿರುದ್ಧ ಮಾಜಿ ಸಚಿವ ವಿಶ್ವೇಶ್ವರ್ ಹೆಗ್ಗಡೆ ಕಾಗೇರಿ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. 
 
ಸದನದ ಕಲಾಪ ವೇಳೆಯಲ್ಲಿ ಪ್ರತಿಕ್ರಿಯಿಸಿದ ಅವರು, ನೀವು ಒಳ್ಳೆಯ ಸಚಿವರಾಗುತ್ತೀರಿ ಎಂದು ಸಚಿವ ಸ್ಥಾನ ನೀಡಿದ್ದಾರೆ. ಆದರೆ ಇಲಾಖೆಯಲ್ಲಿ ಉತ್ತಮ ಅಭಿವೃದ್ಧಿ ಕಾರ್ಯಗಳಾಗುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. 
 
ಕಾಗೇರಿ ಮಾತಿಗೆ ಪ್ರತಿಕ್ರಿಯಿಸಿದ ಸಚಿವ ಪಾಟೀಲ್, ಇಲಾಖೆಯಲ್ಲಿ ಉತ್ತಮ ಅಭಿವೃದ್ಧಿ ಆಗಿದೆ ಎಂದೇ ನಿಮ್ಮ ನರೇಂದ್ರ ಮೋದಿಯವರ ಸರ್ಕಾರವೇ ಅವಾರ್ಡ್ ನೀಡಿದೆ. ಹಾಗಾದರೆ ನರೇಂದ್ರ ಮೋದಿ ಅವರ ಗ್ರಹಿಕೆಯೇ ತಪ್ಪಾ ಎಂದು ಪ್ರಶ್ನಿಸಿದರು. 
 
ಈ ವೇಳೆ ಜೆಡಿಎಸ್ ಸದಸ್ಯ ಬಸವರಾಜ್ ಬೊಮ್ಮಾಯಿ ಮಾತನಾಡಿ, ನೀವು ಉತ್ತಮ ಸಚಿವರಷ್ಟೇ ಅಲ್ಲ, ಉತ್ತಮ ಲೀಡರ್ ಕೂಡ. ನೀವು ಸಿಎಂ ಆಗಿ. ಆದರೆ, ವೈರಿಗಳು ಅಕ್ಕ ಪಕ್ಕದಲ್ಲಿದ್ದಾರೆ ಎಚ್ಚರಿಕೆ ಎಂದು ಕುಹುಕವಾಡಿದರು. 

Share this Story:

Follow Webdunia kannada