Select Your Language

Notifications

webdunia
webdunia
webdunia
webdunia

ತಲೆ ಮೇಲೆ ಬಿದ್ದ ಕಬ್ಬಿಣದ ಸಲಾಕೆ: ಕಾರ್ಮಿಕ ಸಾವು

ತಲೆ ಮೇಲೆ ಬಿದ್ದ ಕಬ್ಬಿಣದ ಸಲಾಕೆ: ಕಾರ್ಮಿಕ ಸಾವು
ರಾಯಚೂರು , ಮಂಗಳವಾರ, 27 ಜನವರಿ 2015 (15:26 IST)
ಕಬ್ಬಿಣದ ಸಲಾಕೆಯೊಂದು ತಲೆ ಮೇಲೆ ಬಿದ್ದ ಪರಿಣಾಮ ಕಾರ್ಮಿಕನೋರ್ವ ಸಾವನ್ನಪ್ಪಿರುವ ಘಟನೆ ನಗರದ ಯರಮರಸ್ ಬಳಿ ಇರುವ ವೈಟಿಎಸ್‌ಪಿಯ ಹೈಡ್ರಲ್ ವಿಭಾಗದಲ್ಲಿ ನಡೆದಿದೆ. 
 
ಮೃತ ಕಾರ್ಮಿಕನನ್ನು ಉತ್ತರ ಭಾರತ ಮೂಲದವನು ಎನ್ನಲಾಗಿದ್ದು, ಸಾಕಷ್ಟು ದಿನಗಳಿಂದ ಈ ಕಟ್ಟಡ ನಿರ್ಮಾಣದಲ್ಲಿ ಕಾರ್ಮಿಕನಾಗಿ ಕೆಲಸ ನಿರ್ವಹಿಸುತ್ತಿದ್ದ ಎನ್ನಲಾಗಿದೆ. ಸುಮಾರು 900 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ವೈಟಿಎಸ್‌ಪಿ ಸಂಸ್ಥೆಯ ಕಟ್ಟಡ ಇದಾಗಿದ್ದು ಸಾಕಷ್ಟು ಕಾರ್ಮಿಕರು ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಹಿಂದೆಯೂ ಕೂಡ ಇಂತಹ ಘಟನೆ ಇದೇ ಕಟ್ಟಡ ನಿರ್ಮಾಣ ವೇಳೆ ನಡೆದಿತ್ತು. ಇದರಿಂದ ಕಾರ್ಮಿಕರು ಸಾಕಷ್ಟು ಅವಘಡಗಳಿಗೆ ತುತ್ತಾಗುತ್ತಿದ್ದು, ಕಂಟ್ರ್ಯಾಕ್ಟರ್ ವಿರುದ್ಧ ಇಲ್ಲಿನ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 
 
ಇನ್ನು ಘಟನೆ ಸ್ಥಳಕ್ಕೆ ಇಲ್ಲಿನ ಸ್ಥಳೀಯ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. 

Share this Story:

Follow Webdunia kannada