Webdunia - Bharat's app for daily news and videos

Install App

ಸಚಿವರ ಖಾತೆ ಹಂಚಿಕೆ; ಇಲ್ಲಿದೆ ನೋಡಿ ಮಾಹಿತಿ

Webdunia
ಗುರುವಾರ, 21 ಜನವರಿ 2021 (11:56 IST)
ಬೆಂಗಳೂರು : ಇಂದು 7 ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಿದ್ದು ಈ ಹಿನ್ನಲೆಯಲ್ಲಿ ಸಂಪುಟದ ಕೆಲವು ಸಚಿವರ ಖಾತೆ ಅದಲು ಬದಲು ಮಾಡಲಾಗಿದೆ.

ಈಗಾಗಲೇ ರಾಜಭವನಕ್ಕೆ ಸಚಿವರ ಸಂಭಾವ್ಯ ಖಾತೆ ಪಟ್ಟಿ ಕಳುಹಿಸಲಾಗಿದ್ದು, ಇಂದು ಖಾತೆ ಹಂಚಿಕೆ ಮಾಡಲಾಗುವುದು ಎನ್ನಲಾಗಿದೆ. ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಮೊದಲು ಗೋಪಾಲಯ್ಯ ನಿರ್ವಹಿಸುತ್ತಿದ್ದು, ಈಗ ಅದನ್ನು ಉಮೇಶ್ ಕತ್ತಿ ಅವರಿಗೆ ನೀಡಲಾಗುವುದು. ಮೀನುಗಾರಿಕಾ ಮತ್ತು ಬಂದರು, ಒಳನಾಡು ಜಲಸಾರಿಗೆ ಮೊದಲು ಕೋಟ ಶ್ರೀನಿವಾಸ ಪೂಜಾರಿ ಬಳಿ ಇದ್ದು ಇದೀಗ ಎಸ್.ಅಂಗಾರ ಅವರಿಗೆ ನೀಡಲಾಗುವುದು. ಕಾನೂನು ಮತ್ತು ಸಂಸದೀಯ ಖಾತೆ ಜೆಸಿ ಮಾಧುಸ್ವಾಮಿಯಿಂದ ಬಸವರಾಜ ಬೊಮ್ಮಾಯಿಗೆ ನೀಡಲಾಗುವುದು.

ವೈದ್ಯಕೀಯ ಶಿಕ್ಷಣ ಖಾತೆ. ಸುಧಾಕರ್ ಅವರಿಂದ ಮಾಧುಸ್ವಾಮಿಗೆ ನೀಡಲಾಗುವುದು, ಕನ್ನಡ ಸಂಸ್ಕೃತಿ ಖಾತೆ ಸಿಎಂ ಬಿಎಸ್ ವೈ ಯಿಂದ ಮಾಧುಸ್ವಾಮಿಗೆ ನೀಡಲಾಗುವುದು. ಹಜ್ ಮತ್ತು ವಕ್ಫ್ ಖಾತೆ ಪ್ರಭು ಚೌಹಾಣ್ ರಿಂದ ನಾರಾಯಣಗೌಡರಿಗೆ ನೀಡಲಾಗುವುದು. ತೋಟಗಾರಿಕೆ ನಾರಾಯಣಗೌಡರಿಂದ ಗೋಪಾಲಯ್ಯಗೆ ನೀಡಲಾಗುವುದು ಎನ್ನಲಾಗಿದೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments