ಅಮಾಯಕನೋರ್ವನನ್ನು ಆರೋಪಿ ಎಂದು ಬಂಧಿಸಿ ರೌಡಿ ಶೀಟರ್ ಪಟ್ಟ ಕಟ್ಟಿದ್ದ ಐವರು ಪೊಲೀಸರಿಗೆ ಇಲ್ಲಿನ ಸ್ಥಳೀಯ ನ್ಯಾಯಾಲಯವೊಂದು 1 ಲಕ್ಷ ರೂ. ಜುಲ್ಮಾನೆ ವಿಧಿಸಿ ಆದೇಶಿಸಿದೆ.
ಭಟ್ಕಳ ಮೂಲದ ಮಂಜುನಾಥ್ ಡಿ. ನಾಯಕ್ ಎಂಬ ಅಮಾಯಕ ವ್ಯಕ್ತಿಯನ್ನು ಯಾವುದೇ ಸಾಕ್ಷಿ ಇಲ್ಲದೆ ಬಂಧಿಸಿ ಗೂಂಡಾ ಎಂಬ ಹಣೆಪಟ್ಟಿಯನ್ನು ಕಟ್ಟಲಾಗಿತ್ತು.
ಈ ಹಿನ್ನೆಲೆಯಲ್ಲಿ ಮಂಜುನಾಥ್, ಐವರು ಪೊಲೀಸರ ವಿರುದ್ಧ ದೂರು ದಾಖಲಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಆರೋಪಿ ಸ್ಥಾನದಲ್ಲಿದ್ದ ಪೊಲೀಸರು ಸೂಕ್ತ ಸಾಕ್ಷಿಗಳೊಂದಿಗೆ ಮಂಜುನಾಥ್ ಅವರನ್ನು ಗೂಂಡಾ ಎಂದು ಸಾಬೀತು ಪಡಿಸುವಲ್ಲಿ ವಿಫಲವಾದರು. ಈ ಹಿನ್ನೆಲೆ ವಾದ-ವಿವಾದಗಳನ್ನು ಆಲಿಸಿದ ನ್ಯಾಯಾಲಯ ಈ ಮಹತ್ವದ ತೀರ್ಪು ನೀಡಿದೆ.